ದೇವರ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿದ ಯೋಗರತ್ನ ತನುಶ್ರೀ

ಕಾರ್ಕಳ: ಕೆಲವೊಂದು ವ್ಯಕ್ತಿಗಳು ತಮ್ಮ ಸಾಧನೆಗಳ ಮೂಲಕ ಗುರುತಿಸಿಕೊಂಡರೆ, ಇನ್ನು ಕೆಲವರು ವ್ಯಕ್ತಿತ್ವ ದ ಮೂಲಕ ಗುರುತಿಸಲ್ಪಡುತ್ತಾರೆ.ಆದರೆ ಉಡುಪಿಯ ಈ ಪ್ರತಿಭೆ ಇವೆರಡರಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಹೌದು ವಿಶ್ವ ದಾಖಲೆಗಳ ಸರದಾರಿಣಿ ತನುಶ್ರೀ ತನ್ನ ಹುಟ್ಟು ಹಬ್ಬವನ್ನು ಅತೀ ಸರಳವಾಗಿ ಆಚರಿಸಿಕೊಂಡರು.

ಯೋಗರತ್ನ ಉದ್ಯಾವರದ ಪಿತ್ರೋಡಿ ಬಾಲಪ್ರತಿಭೆ ತನುಶ್ರೀ ಪಿತ್ರೋಡಿ ತನ್ನ 12ನೇ ಹುಟ್ಟು ಹಬ್ಬವನ್ನು ಕಾರ್ಕಳದ ಅಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆಯ ವಿಶೇಷ ಮಕ್ಕಳಿಗೆ ಅನ್ನದಾನದ ಮೂಲಕ ಆಚರಿಸಿದರು.ಈ ಮೂಲಕ ನಾವು ಎಷ್ಟು ಸಾಧನೆ ಮಾಡಿದರು ಮಾನವೀಯತೆ ಮುಖ್ಯ ಎಂದು ತೋರಿಸಿಕೊಟ್ಟಿದ್ದಾರೆ.

 
 
 
 
 
 
 
 
 
 
 

Leave a Reply