ಉಡುಪಿ : ತೆಂಕಪೇಟೆ ಫ್ರೆಂಡ್ಸ್ ಉಡುಪಿ ಇವರ ಆಶ್ರಯದಲ್ಲಿ ಜಿ ಎಸ್ ಬಿ ಟ್ರೋಫಿ 2021 ಕ್ರಿಕೆಟ್ ಪಂದ್ಯಕೂಟವನ್ನು ಬೀಡಿನಗುಡ್ಡೆ ಮೈದಾನದಲ್ಲಿ ಶನಿವಾರ , ಆದಿತ್ಯವಾರ ನೆಡೆಯಿತು.
ಪಂದ್ಯಕೂಟವನ್ನು ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ ವಿ ಶೆಣೈಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸಮಾಜ ಸೇವಕ ಪ್ರದೀಪ್ ರಾವ್, ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷರಾದ ನಿತೇಶ್ ಶೆಣೈ, ಕ್ರಿಕೆಟ್ ಆಟಗಾರ ಡಾ. ವಿನೋದ್ ನಾಯಕ್ ಉಪಸ್ಥಿತರಿದ್ದರು.
ಜಿ ಎಸ್ ಬಿ ಸಮಾಜ ಬಾಂಧವರ 2 ದಿನಗಳ ಈ ಪಂದ್ಯಕೂಟದಲ್ಲಿ 16 ತಂಡಗಳು ಪಾಲ್ಗೊಂಡಿದ್ದು S S ಫ್ರೆಂಡ್ಸ್ ಮುಲ್ಕಿ ಪಂದ್ಯಕೂಟ ಗೆದ್ದು ವಿನ್ನರ್ ಪ್ರಶಸ್ತಿ , ಜಿ ಎಸ್ ಬಿ ಫ್ರೆಂಡ್ಸ್ ಹರಿಖಂಡಿಗೆ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಜಗದೀಶ ಕಾಮತ್,ಡಾ ನರೇಂದ್ರ ಶೆಣೈ, ಡಾ ರಾಜೇಶ್ ಭಕ್ತ ಪ್ರಶಸ್ತಿ ಪ್ರದಾನ ಮಾಡಿದರು.
ರವಿ ಕಡಿಯಾಳಿ ಅವರು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಆಟಗಾರರನ್ನು ಸನ್ಮಾನಿಸಲಾಯಿತು. ತೆಂಕಪೇಟೆ ಫ್ರೆಂಡ್ಸ್ ಉಡುಪಿ ಇದರ ಪಾಧಿಕಾರಿಗಳು ಉಪಸ್ಥರಿದ್ದರು.