ಸುರತ್ಕಲ್‌ : ಹಿಂದೂ ಯುವಕನನ್ನು ವರಿಸಿದ ಮುಸ್ಲಿಂ ಯುವತಿ!

ಹಿಂದೂ ಯುವಕನೊಬ್ಬ ಅಂತಧರ್ಮೀಯ ವಿವಾಹವಾಗಿರುವ ಘಟನೆಯೊಂದು ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ಮುಸ್ಲಿಂ ಯುವತಿ ಹಿಂದೂ ಯುವಕನನ್ನೇ ವರಿಸಿದ್ದಾಳೆ. ಹಿಂದೂ ಸಂಘಟನೆಯಲ್ಲಿರುವ ಪ್ರಶಾಂತ್‌ ಭಂಡಾರಿ ಎಂಬ ಯುವಕ ಮುಸ್ಲಿಂ ಯುವತಿಯ ಜೊತೆ ವಿವಾಹವಾಗಿದ್ದಾನೆ.

ಸುರತ್ಕಲ್‌ ನಿವಾಸಿ ಆಯೇಷಾ ಎಂಬಾಕೆಯ ಜೊತೆ ಪ್ರಶಾಂತ್‌ ನ.30 ರಂದು ತೆರಳಿರುವ ಘಟನೆ ನಡೆದಿತ್ತು. ಇವರಿಬ್ಬರು ಮೂರು ವರ್ಷಗಳಿಂದ ಪ್ರೀತಿಸಿ ವಿವಾಹವಾಗಿದ್ದಾರೆ. ಪ್ರಶಾಂತ್‌ ಸುರತ್ಕಲ್‌ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಎಂದು ವರದಿಯಾಗಿದೆ. ಆಯೇಷಾ ಪೋಷಕರು ಸುರತ್ಕಲ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲು ಮಾಡಿದ್ದಾರೆ.

 
 
 
 
 
 
 
 
 
 
 

Leave a Reply