ಡಾ.ಶಶಿಕಿರಣ್ ಉಮಾಕಾಂತ್ ಗೆ “ವೈದ್ಯವಾರಿಧಿ” ಬಿರುದು

ಉಡುಪಿ : ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್ ಸಮಯದಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದ ಡಾ.ಶಶಿಕಿರಣ್ ಉಮಾಕಾಂತ್ ರವರನ್ನು “ವೈದ್ಯವಾರಿಧಿ” ಎಂಬ ಬಿರುದಿನೊಂದಿಗೆ ಪಲಕವನ್ನಿತ್ತು ವಿಶೇಷವಾಗಿ ಸನ್ಮಾನಿಸಿ ಹಾಗೂ ಪರ್ಯಾಯೋತ್ಸವದ ಸಂದರ್ಭದಲ್ಲಿ ದೇಣಿಗೆಯನ್ನು ನೀಡಿ ವಿಶೇಷವಾಗಿ ಸಹಕರಿಸಿದ ಭಕ್ತಾಭಿಮಾನಿಗಳನ್ನು ಸನ್ಮಾನಿಸಿದರು.

ದೇವರು ಅವನು ಇಚ್ಛಿಸಿದಲ್ಲಿ ವ್ಯಕ್ತವಾಗುವುದನ್ನು ಅವತಾರ ಎಂದು ತಿಳಿದು,ಅವನ ಮಹಿಮೆಯನ್ನು ತಿಳಿದುಕೊಳ್ಳುವುದರಿಂದ ನಮಗೆ ಶ್ರೇಯಸ್ಸಾಗುತ್ತದೆ ಎಂದು ಅನುಗ್ರಹಿಸಿ,ಸನ್ಮಾನಿತ ವೈದ್ಯರನ್ನೂ,ಮತ್ತಿರರನ್ನೂ ಹರಸಿ ನಮ್ಮ ಪರ್ಯಾಯ ಕಾಲದಲ್ಲಿ ಹೀಗೆ ನಿರಂತರವಾಗಿ ಪ್ರೋತ್ಸಾಹ ನೀಡುವಂತಾಗಲಿ ಎಂದು ಹರಸಿದರು.

ಪರ್ಯಾಯೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು ಉಪಸ್ಥಿತರಿದ್ದರು. ಸಮಿತಿಯ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ,ಗೋಪಾಲಕೃಷ್ಣ ಉಪಾಧ್ಯಾಯ ವಂದಿಸಿದರು.

 
 
 
 
 
 
 
 
 

Leave a Reply