ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳ ಉನ್ನತಿ ನೋಡಿ ಸಂತೋಷ ಪಡುವುದರಿಂದ ಶಿಕ್ಷಕ ವೃತ್ತಿ ಒಂದು ಸೇವೆ : ಡಾ.ಭಾಸ್ಕರ್ ಶೆಟ್ಟಿ ಎಸ್

ಉಡುಪಿ : ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ಉಡುಪಿ ಇಲ್ಲಿ ಶಿಕ್ಷಕರ ದಿನಾಚರಣೆಯನ್ನು ಸೆ.6ರಂದು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್ ವಹಿಸಿ ಗುರು ಯಾವತ್ತಿಗೂ ಲಘುವಾಗಬಾರದು – ಒಬ್ಬ ಶಿಕ್ಷಕ ತನ್ನ ವಿದ್ಯರ‍್ಥಿಗಳ ಉನ್ನತಿ ನೋಡಿ ಸಂತೋಷ ಪಡುತ್ತಾನೆ. ಈ ಕಾರಣದಿಂದಲೇ ಶಿಕ್ಷಕ ವೃತ್ತಿಯನ್ನು ಸೇವೆವ್ಯಾಪ್ತಿಗೆ ಬಂದಿದೆ ಎಂದರು.

ಶ್ರೀ ವಿಶ್ವ ವರ್ಮ ಪ್ರೌಢ ಶಾಲೆ ಬೆಳ್ಳಂಪಳ್ಳಿ ಇಲ್ಲಿನ ನಿವೃತ್ತ ಶಿಕ್ಷಕ ಸಂಜೀವ ಮಡಿವಾಳರನ್ನು ಸನ್ಮಾನಿಸಲಾಯಿತು.

ರಾಮಚಂದ್ರ ಅಡಿಗ ಜಿ. ಪ್ರಾಸ್ತವಿಕ ಮಾತುಗಳನ್ನಾಡಿ, ಸೋಜನ್ ಕೆ.ಜಿ., ಸ್ವಾಗತಿಸಿದರು.ಜಯಲಕ್ಷ್ಮೀ ಸನ್ಮಾನಿತರನ್ನು ಪರಿಚಯಿಸಿ ಹಾಗೂ ಡಾ.ದಿವ್ಯ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply