ಶ್ರೀ ರಾಮಸೇನಾ ಕರ್ನಾಟಕದ ಹದಿನೇಳನೆಯ ವರ್ಷದ ದತ್ತಮಾಲಾ ಅಭಿಯಾನ

ಮಂಗಳೂರು : ಶ್ರೀ ರಾಮಸೇನಾ ಕರ್ನಾಟಕದ ಹದಿನೇಳನೆಯ ವರ್ಷದ ದತ್ತ ಮಾಲಾ ಅಭಿಯಾನದ ಪ್ರಯುಕ್ತ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ದತ್ತ ದೀಪೋತ್ಸ ಕಾರ್ಯಕ್ರಮಕ್ಕೆ ಮಂಗಳೂರಿನ ಕದ್ರಿಯ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ಕಳೆದ ಗುರುವಾರ ರಾತ್ರಿ “ಮಾತೆ”ಯಂದಿರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.

ಈ ಕಾರ್ಯದಲ್ಲಿ ಅಸಂಖ್ಯಾತ ಮಾತೆಯಂದಿರು ಭಾಗವಹಿಸಿದ್ದು- ಭಜನೆ- ಸತ್ಸಂಗ ನಡೆಯಿತು. ದೀಪಾರಾಧನೆ ಬಳಿಕ ಉಟೋಪಚಾರ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್,ಜಿಲ್ಲಾ ಅಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ,ಉಪಾಧ್ಯಕ್ಷ ಹರೀಶ್ ಬೊಕ್ಕಪಟ್ನ,ಗುರುಗಳಾದ ಪುರುಷೋತ್ತಮ ಪಾವಂಜೆ, ಸುರೇಖಾ ಸತೀಶ್, ಆಶಾ ಜ್ಯೋತಿ, ಪಲ್ಲವಿ ಅರುಣ್, ಶಿಲ್ಪಾ ಉಲ್ಲಾಸ್, ಜಯಲಕ್ಷ್ಮಿ ಚಿತ್ತರಂಜನ್, ಸಂಗೀತಾ ನರೆನ್, ಸುನಿತಾ ಅಜಿತ್, ಪೂರ್ಣಿಮಾ ರೋಶನ್,ತುಳಸಿ ಹರೀಶ್ ಉಪಸ್ಥಿತರಿದ್ದರು. 

ಅನ್ನದಾನ ವ್ಯವಸ್ಥೆಯ ನ್ನು ವಹಿಸಿಕೊಂಡ ತುಳುನಾಡು ಚಿಟ್ಸ್ ಮಾಲಕ ಸಂದೇಶ್ ಗೀತಾ ಶೆಟ್ಟಿ ದಂಪತಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply