ಮಜೂರು ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಮೇಲೆ ಹಲ್ಲೆಗೆ ಯತ್ನ

ಉಡುಪಿ: ಬಿಜೆಪಿ ಮುಖಂಡರೊಬ್ಬರ ಮೇಲೆ ತಲವಾರಿನಿಂದ ಹಲ್ಲೆ ಗುರುವಾರ ರಾತ್ರಿ ನಡೆದಿದೆ.ಉಡುಪಿ ಜಿಲ್ಲೆ ಕಾಪು ತಾಲೂಕಿನ ಬಂಟಕಲ್ಲಿನಲ್ಲಿರುವ ಸಾಯಿಬಾಬಾ ಬೇಕರಿ ಮಾಲಕ ಗಣೇಶ್ ಶೆಟ್ಟಿ ಹಲ್ಲೆಗೊಳಗಾದ ವ್ಯಕ್ತಿ.

ರಾತ್ರಿ ಬೇಕರಿ ಮುಚ್ಚಿ ಗಣೇಶ್ ಶೆಟ್ಟಿ ಮನೆಗೆ ಹೊರಡುವ ವೇಳೆ, ಗುರುತು ಪರಿಚಯದವರೇ ಆಗಿರುವ ಸ್ಟೀಫನ್ ಮೇಂಡೋನ್ಸಾ ಮತ್ತು ಚರಣ ಶೆಟ್ಟಿ ರವರು ಮೋಟಾರ್ ಸೈಕಲ್ನಲ್ಲಿ ಬಂದು ಮಾತಿನ ಚಕಮಕಿ ನಡೆಸಿದ್ದಾರೆ.

ವಿಪರೀತ ಮದ್ಯಪಾನ ಮಾಡಿದ್ದ ಅವರು, ಏಕಾಏಕಿಯಾಗಿ ಗಣೇಶ್ ರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಕೈಯಿಂದ ಕೆನ್ನೆಗೆ, ತಲೆಗೆ, ಬೆನ್ನಿಗೆ ಹೊಡೆದಿದ್ದಾರೆ. ಇದರಿಂದ ಗಣೇಶ್ ಆಯ ತಪ್ಪಿ ನೆಲಕ್ಕೆ ಬೀಳುವಂತಾಯ್ತು. ಈ ವೇಳೆ ಇಬ್ಬರೂ ಸೇರಿ ಬೈಕ್ ನಲ್ಲಿ ತಂದಿದ್ದ ತಲವಾರಿನಿಂದ ಹೊಡೆಯಲು ಮುಂದಾಗಿದ್ದಾರೆ. ಆಗ ಗಣೇಶ್ ಬೊಬ್ಬೆ ಹೊಡೆದಿದ್ದು ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಇಬ್ಬರಿಗೂ ಹಿಗ್ಗಾಮುಗ್ಗ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಜೂರು ಪಂಚಾಯತ್ ನ ಮಾಜಿ ಅಧ್ಯಕ್ಷನಾಗಿದ್ದ ಗಣೇಶ್, ಅಂಗವಿಕಲರಾಗಿರು. ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಈ ಹಲ್ಲೆ ಯಾವ ದ್ವೇಷದ ಕಾರಣಕ್ಕೆ ನಡೆದಿದೆ ಅನ್ನೋದು ತನಿಖೆಯಿಂದ ತಿಳಿಯಬೇಕಷ್ಟೇ. ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply