ಶ್ಯಾಮ ಸುಂದರಿ ಟ್ರೋಫಿ 2021

ಉಡುಪಿ: 30 ನೇ ವರ್ಷದ ಶ್ಯಾಮ ಸುಂದರಿ ಟ್ರೋಫಿ 2021 -ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಅಲೆವೂರಿನ ನೆಹರು ಕ್ರೀಡಾಂಗಣದಲ್ಲಿ ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷ ಲಯನ್ ವರ್ವಾಡಿ ಪ್ರಸಾದ ಶೆಟ್ಟಿ ಉದ್ಘಾಟಿಸಿದರು.

ವಿಷ್ಣುಮೂರ್ತಿ ಟ್ರಾವೆಲ್ಸ್ ಅಲೆವೂರು ಮಾಲಕ ರಾಮಚಂದ್ರ ಕೊಡಂಚ ಅಧ್ಯಕ್ಷತೆ ವಹಿಸಿ ಸಂಘವು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಟವನ್ನು ಸಂಘಟಿಸುವಂತಾಗಲಿ ಎಂದು ಆಶಿಸಿದರು.ಮಹಿಳಾ ಕ್ರಿಕೆಟ್ ಆಟಗಾರ್ತಿ ಏಕ್ತಾ ಪಟೇಲ್ ಮುಖ್ಯ ಅತಿಥಿಗಳಾಗಿ ಉಪಸ್ತಿತರಿದ್ದರು.

ಸಂಘದ ಗೌರವಾಧ್ಯಕ್ಷ ಹರೀಶ್ ಕಿಣಿ,ಅದ್ಯಕ್ಷ ಗುರುರಾಜ್ ಸಾಮಗಾ,ಕಾರ್ಯದರ್ಶಿ ಅರುಣ್ ಪೂಜಾರಿ,ಕ್ರೀಡಾ ಕಾರ್ಯದರ್ಶಿ ಸುಧಕರ್ ಪೂಜಾರಿ,ಜಯ ಸೇರಿಗಾರ್,ನಿತ್ಯನಂದಾ ಅಂಚನ್,ಕ್ರಿಕೆಟ್ ತಂಡದ ನಾಯಕ ಸುದೀರ್ ಸೇರಿಗಾರ್,ಗೌರವ ಸಲಹೆಗಾರ ಮುರಳಿಧರ್ ಭಟ್,ದಿನೇಶ್ ಕಿಣಿ ,ಸತೀಶ್ ಪೂಜಾರಿ,ಶೇಖರ್ ಕಲಾಪ್ರತಿಭ ಉಪಸ್ತಿತರಿದ್ದರು.ಪ್ರತಾಪ ಕುಂದರ್ ಕಾರ್ಯಕ್ರಮ ನಿರ್ವಹಿಸಿ,ದಯನಂದ ಅಂಚನ್ ವಂದಿಸಿದರು.ಜೆಲ್ಲೆಯ ಬಲಿಷ್ಠ 16 ತಂಡಗಳು ಈ ಪಂದ್ಯದಲ್ಲಿ ಭಾಗವಹಿಸಿವೆ.

 
 
 
 
 
 
 
 
 
 
 

Leave a Reply