75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

75ನೇ ಸ್ವಾತಂತ್ರೋತ್ಸವ ಮತ್ತು ಸಮಾಜಸೇವಕ ವಿ.ಜಿ ಪಾಟೀಲ್ ರ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ಹಲವಾರು ಜನ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

ಜೈoಟ್ಸ್ ವೆಲ್ಫೇರ್ ಫೌಂಡೇಶನ್ ನ ರಾಜ್ಯ ಉಪಾಧ್ಯಕ್ಷ ವಿ.ಜಿ ಪಾಟೀಲ್ ಮಾತನಾಡಿ ಸಂತಸ ವ್ಯಕ್ತಪಡಿಸಿದರು. 

ಶಾಂತಣ್ಣ ವೈ ಕಡಿವಾಲ್ ಮಾತನಾಡಿ ಯುವಕರಲ್ಲಿ ರಕ್ತದಾನ ಮಾಡುವ ಮೂಲಕ ವೊಂದು ಜೀವ ಉಳಿಸಿದಂತೆ ಎಂದರು. ಆರ್ ಕರಾವೀರ್ ಮಠ್ ಮಾತನಾಡಿ ರಕ್ತದಾನ ಮಾಡುವದರಿಂದ ದೇಹಕ್ಕೆ ಅರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು. ಸಮನ್ವಯ ಸೇವಾ ಸಮಿತಿಯ ಅಧ್ಯಕ್ಷ ವಿನೋದ್ ಅಲಾಡಿ ಮಾತನಾಡಿ ಸಂತಸ ವ್ಯಕ್ತಪಡಿಸಿದರು. 

ಪ್ರೇಮಬಿಂದು ಬ್ಲಡ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ವಿ ಎಮ್ ಹಿರೇಮಠ್, ಅನುಪಮ ಹಿರೇಮಠ್ ಕೂಡ ಉಪಸ್ಥಿತರಿದ್ದರು. ಸಂಸ್ಥೆಯ ದೀಪಕ್ ಕರ್ಜಗಿ, ವಿಜಯ್ ಜಲ್ಲಿ, ನಂದೀಶ್ ಹಿರೇಮಠ್, ಎಸ್ ಕೆ ಕೊಟ್ರೇಶ್, ವಿನಾಯಕ್ ಅವಾರಿ, ಸ್ಟೀವನ್ ನೀಲಗುಂದ್, ರಾಶಿದ್ ಗಂಗೂಲಿ,ಲಂಕೇಶ,ರಾಘವೇಂದ್ರ,ವಿಶಾಲ್, ಸ್ಕಂದರ್ಚಿತ್, ಮಹೇಶ್ ಸುಳ್ಳದ, ಡಾ.ಮರಿಯಪ್ಪ ಹಾಗೂ ಹಲವಾರು ಜನ ಉಪಸ್ಥಿತರಿದ್ದು ರಕ್ತದಾನ ಮಾಡಿದರು.

 
 
 
 
 
 
 
 
 
 
 

Leave a Reply