ಪವಿತ್ರ ಬಾಂಧವ್ಯದ ರಕ್ಷಾ ಬಂಧನ

ಸಹೋದರಿಯರಿಗೆ ರಕ್ಷೆಯನ್ನು ಕೊಡುವ​ ಪವಿತ್ರ ದಿನ ರಕ್ಷಾಬಂಧನ. ಸಹೋದರಿಯರ​ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಅವರರಕ್ಷಣೆಗೆ ಸಹೋದರು​ ಕಟಿಬದ್ಧರಾಗಿರುವುದು ರಕ್ಷಾಬಂಧನದ​ ​ಸಂಕೇತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.​ ಅವರು ಸೋಮವಾರ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ​ ಮಹಿಳಾ ಮೋರ್ಚಾದ ವತಿಯಿಂದ ನಡೆದ​ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ​ ಮಾತನಾಡಿದರು.​ ರಕ್ಷಾಬಂಧನದ ಬದ್ಧತೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಬಾಂಧವ್ಯದ ಮೌಲ್ಯ ಹಾಗೂ​ ಭಾವನೆ ನಿತ್ಯ ನಿರಂತರವಾಗಿರಬೇಕು. ಜಿಲ್ಲಾ​ ಮಹಿಳಾ ಮೋರ್ಚಾ ಅತ್ಯಂತ ಕ್ರಿಯಾಶೀಲತೆಯಿಂದ​ ವೈವಿಧ್ಯಮಯ ಕಾರ್ಯಕ್ರಮಗಳನ್ನು​ ಆಯೋಜಿಸುತ್ತಿದೆ.​ ​ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ  ಚಟುವಟಿ ಕೆಗಳು ಮಹಿಳಾ ಮೋರ್ಚಾದಿಂದ​ ಮೂಡಿ ಬರಲಿ.ಎಲ್ಲಾ ಸಹೋದರಿಯರಿಗೆ​ ​ಸಹೋದರರ ಶ್ರೀ ರಕ್ಷೆ ನಿರಂತರವಾಗಿರಲಿ​ ಎಂದರು
ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿ​ ರಕ್ಷಾಬಂಧನ ಸ್ವಾಭಿಮಾನದ ಸಂತೇಕವಾಗಿದ್ದು,​ ಗಿಡಕ್ಕೆ ಬೇಲಿಯ ರಕ್ಷೆ, ನೀರಿಗೆ ಪಾತ್ರೆಯ ರಕ್ಷೆ,​ ದೇಶದ ಗಡಿಗಳಲ್ಲಿ ಸೈನಿಕರ ರಕ್ಷೆ ಇದ್ದಂತೆ​ ನಮ್ಮೆಲ್ಲಾ ಸಹೋದ ರಿಯರಿಗೆ ಸಹೋದರದ​ ಆತ್ಮ ವಿಶ್ವಾಸ ಹಾಗೂ ಮನೋಬಲದ ಶ್ರೀರಕ್ಷೆ​ ಸದಾ ಇರಲಿ. ಈ ಪವಿತ್ರ ರಕ್ಷಾ ಬಂಧನವುಹಿಳಾ ಶಕ್ತಿಗೆ ಚೈತನ್ಯ ತುಂಬಲಿ ಎಂದರು.
 
ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್,​ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ​ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ​ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ​ ಹೆಗ್ಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಯಶ್ಪಾಲ್ ಎ.​ ಸುವರ್ಣ, ಗೀತಾಂಜಲಿ ಸುವರ್ಣ, ಶ್ರೀಶ ನಾಯಕ್​ ಪೆರ್ಣಂಕಿಲ, ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ​ ಕುತ್ಯಾರು ನವೀನ್ ಶೆಟ್ಟಿ, ಸದಾನಂದಉಪ್ಪಿನಕುದ್ರು, ಬಿಜೆಪಿ ಉಡುಪಿ ನಗರಾಧ್ಯಕ್ಷ​ ಮಹೇಶ್ ಠಾಕೂರ್, ಮಹಿಳಾ ಮೋರ್ಚಾ​ ನಗರಾಧ್ಯಕ್ಷೆ ಸರೋಜ ಶೆಟ್ಟಿಗಾರ್, ಜಿಲ್ಲಾ
ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಸಹ​ ವಕ್ತಾರ ಶಿವಕುಮಾರ್ ಅಂಬಲಪಾಡಿ, ನಗರಸಭಾ​ ಸದಸ್ಯ ಪ್ರಭಾಕರ ಪೂಜಾರಿ, ಜಿಲ್ಲಾ ಮಹಿಳಾ​ ಮೋರ್ಚಾ ಪ್ರ.ಕಾರ್ಯದರ್ಶಿ ರಶ್ಮಿತಾ ಬಿ. ಶೆಟ್ಟಿ, ಜಿಲ್ಲಾ​ ಯುವ ಮೋರ್ಚಾ ಪ್ರ.ಕಾರ್ಯದರ್ಶಿಗಳಾದ ಅಕ್ಷಿತ್ ಶೆಟ್ಟಿ ಹೆರ್ಗ, ಶರತ್ ಶೆಟ್ಟಿ, ಜಿಲ್ಲಾ ಹಿಂದುಳಿದ​ ವರ್ಗಗಳ ಮೋರ್ಚಾ ಅಧ್ಯಕ್ಷ ಸುರೇಂದ್ರ​ ಪಣಿಯೂರು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾಅಧ್ಯಕ್ಷ ದಾವೂದ್ ಅಬೂಬಕರ್, ಮಹಿಳಾ ಮೋರ್ಚಾ​ ಪದಾಧಿಕಾರಿಗಳಾದ ಕೇಸರಿ, ರಮಾ ಶೆಟ್ಟಿ, ಸುಮಾ ಶೆಟ್ಟಿ, ಪವಿತ್ರ, ದಯಾಶಿನಿ, ಸುಧಾ ಪೈ​ ಮುಂತಾದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply