ಜಗದೀಶ್ ಗೆ ಮೊದಲು ಮಸಿ ಬಳಿಯುವ ಬಿಲ್ಲವರಿಗೆ 1 ಲಕ್ಷ ರೂ. ಘೋಷಿಸಿದ ಪ್ರತಿಭಾ ಕುಳಾಯಿ

ಮಂಗಳೂರು: ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಮುಖಕ್ಕೆ ಮೊದಲು ಮಸಿ ಬಳಿಯುವ ಬಿಲ್ಲವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ‌ ಹೇಳಿದ್ದಾರೆ. ಹೌದು, ಬಿಲ್ಲವ ಸಮುದಾಯ, ಕಾಂಗ್ರೆಸ್​ ಹಿರಿಯ ನಾಯಕ ಜನಾರ್ದನ ಪೂಜಾರಿ ಹಾಗೂ ಕೋಟಿ-ಚೆನ್ನಯರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಅಧಿಕಾರಿಯವರ ವಿರುದ್ಧ  ಫೇಸ್​​​ಬುಕ್ ಲೈವ್ಲೈವ್ನಲ್ಲಿ ಪ್ರತಿಭಾ  ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಬಿಲ್ಲವ ಮುಖಂಡ ಬಿ.ಜನಾರ್ದನ ಪೂಜಾರಿಯವರ ಕಾಲು ಹಿಡಿಯೋದಿಲ್ಲ ಎಂದು ಹೇಳಿಕೆ ನೀಡಿರುವ ಜಗದೀಶ್ ಅಧಿಕಾರಿಯವರು ಅವರ ಕಾಲು ಹಿಡಿದು ಕ್ಷಮೆಯಾಚಿಸಬೇಕು. ವೀರ ಪುರುಷ ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಮೂರು ದಿನದಲ್ಲಿ ತಪ್ಪು ಕಾಣಿಕೆ ಹಾಕಬೇಕು ಎಂದಿದ್ದಾರೆ‌.ಮೂರು ದಿನಗಳಲ್ಲಿ ಜಗದೀಶ್ ಅಧಿಕಾರಿಯವರು ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚನೆ ಎಂದು ಕುಳಾಯಿ ಆಗ್ರಹಿಸಿದ್ದಾರೆ. ಇದೀಗ ಆ ಫೇಸ್ಬುಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

 
 
 
 
 
 
 
 
 
 
 

Leave a Reply