ಪರ್ಕಳ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪ್ರಥಮ ಹಂತದ ಲಸಿಕೆ ಕಾರ್ಯಕ್ರಮ

ಉಡುಪಿ : ಪರ್ಕಳ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಪ್ರಥಮ ಹಂತದ ಲಸಿಕೆ ಕಾರ್ಯಕ್ರಮವನ್ನು ಶಾಲಾ ಸಂಚಾಲಕ ದಿನೇಶ್ ಹೆಗ್ಡೆ ಉದ್ಘಾಟಿಸಿ ಶಾಲಾ ಮಕ್ಕಳು ಕೋವಿಡ್ ಲಸಿಕೆಯನ್ನು ಪಡೆಯುಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಧೈರ್ಯದಿಂದ ಮುಂದೆ ಬಂದು ಹಿರಿಯರಿಗೆ ಮಾರ್ಗದರ್ಶಿಗಳಾಗಬೇಕು ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು , 80 ಬಡಗುಬೆಟ್ಟು ಗ್ರಾಮ ಪಂಚಾಯತ್, ಕಾರ್ಕಳ ಪ್ರೌಢಶಾಲೆ ಇವರ ಆಶ್ರಯದಲ್ಲಿ ನಡೆಯಿತು ವೈದ್ಯಾಧಿಕಾರಿ ನರಸಿಂಹ ನಾಯಕ್, ಪಂಚಾಯತ್ ಉಪಾಧ್ಯಕ್ಷ ನಿರುಪಮಾ ಹೆಗ್ಡೆ, ಪಂಚಾಯತ್ ಸದಸ್ಯ ರೂಪ ನಾಯಕ್, ಸಿ.ಆರ್.ಪಿ. ದಿನೇಶ್, ಆಡಳಿತಾಧಿಕಾರಿ ವಾಸು ಪ್ರಭು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಆನಂದ ನಾಯಕ್ ಸ್ವಾಗತಿಸಿ ಸುಜಾತಾ ಎಂ, ವಂದಿಸಿದರು.

 
 
 
 
 
 
 
 
 
 
 

Leave a Reply