ಪ್ರಧಾನ ಮಂತ್ರಿಯವರ ಕನಸು ನನಸಾಗಲಿ- ಇ ಶ್ರಮ ಮನೆಮನೆಗೂ ತಲುಪಲಿ : ಪುರಸಭೆ ಅಧ್ಯಕ್ಷೆ ಸುಮಾ ಕೇಶವ್

ಕಾರ್ಕಳ : ಯೂತ್ ಫಾರ್ ಸೇವಾ ಉಡುಪಿ ಇವರ ಆಶ್ರಯದಲ್ಲಿ ಯುವಶಕ್ತಿ ಸಮೂಹ ಸಂಸ್ಥೆ ಕಾಳಿಕಾಂಬಾ ಇವರ ಸಹಯೋಗದೊಂದಿಗೆ ಇ ಶ್ರಮ ನೊಂದಾವಣೆ ಕಾರ್ಯಕ್ರಮ ನಡೆಯಿತು. ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಅಧ್ಯಕ್ಷತೆ ವಹಿಸಿ, ಪ್ರಧಾನಿಯವರ ಕನಸು, ಅವರ ಯೋಜನೆಗಳು ಪ್ರತಿ ಮನೆಗೂ ತಲುಪಿ ಕನಸು ನನಸಾಗಲಿ ಎಂದರು.

13 14 15 ಈ ಮೂರು ಪುರಸಭೆ ವಾರ್ಡ್ ನ ಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪುರಸಭಾ ಸದಸ್ಯ ಪ್ರದೀಪ್, ಮೀನಾಕ್ಷಿ ಕೋಟ್ಯಾನ್ , ಪ್ರದೀಪ್ ಕೋಟ್ಯಾನ್ ಉಸ್ಥಿತರಿದ್ದರು. ಒಂದು ಯೋಜನೆ ಸರಕಾರ ನಮಗಾಗಿ ಮಾಡುತ್ತಿದೆ ಎಂದರೆ ಅದರ ಫಲವಸ್ತುಗಳನ್ನು ನಾವು ಉಪಯೋಗಿಸಬೇಕು ಯೂತ್ ಫಾರ್ ಸೇವ ತಂಡದ ರಾಘವೇಂದ್ರ ಪ್ರಭು ಅಭಿನಂದಿಸಿದರು. 

ರಮಿತಾ ಶೈಲೆಂದ್ರ ನಳಿನಾಕ್ಷಿ, ಶಾರದಾ ಉಪಸ್ಥಿತರಿದ್ದರು. ಯುವಶಕ್ತಿ ಎಜುಕೇಶನ್ ಸೊಸೈಟಿ ಸಂಚಾಲಕ ಅಬ್ದುಲ್ ಖಲಿಕ್ ನಿರೂಪಿಸಿದರು .

 
 
 
 
 
 
 
 
 
 
 

Leave a Reply