ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನವೀಕರಣಕ್ಕೆ 20 ಲಕ್ಷ ರೂ ಅನುದಾನ   

ಉಡುಪಿ: ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನವೀಕರಣ ಕಾರ್ಯಗಳಿಗೆ ಹಿಂದೂ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯಿಂದ 20 ಲಕ್ಷ ರೂ ಮುಂಜೂರಾಗಿದೆ.ಈ ಅನುದಾನದ ಚೆಕ್ ನ್ನು ಇಂದು ಉಡುಪಿಯ ಧಾರ್ಮಿಕ ದತ್ತಿ ಇಲಾಖೆಯ ಉಪನಿರ್ದೇಶಕ ಗಣೇಶ್ ರಾವ್ ನೀಡಿದ್ದಾರೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ ಎನ್ ಪ್ರಸನ್ನ ಕುಮಾರ್ ರಾವ್,ವಾಸುದೇವ ಭಟ್, ವಿಜಯ ಪೂಜಾರಿ ಉಪಸ್ಥಿತರಿದ್ದರು ಈ ಅನುದಾನವನ್ನು ಮಂಜೂರುಗೊಳಿಸಿದ ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ, ಹಿಂದೂ ಧರ್ಮಾದಾಯ ದತ್ತಿ ಮತ್ತು ಮುಜರಾಯಿ ಮಂತ್ರಿಗಕೋಟ ಶ್ರೀನಿವಾಸ ಪೂಜಾರಿಗೆ ಸಹಕರಿಸಿದ ಶಾಸಕ ಕೆ ರಘುಪತಿ ಭಟ್, ಮಾನ್ಯ ಜಿಲ್ಲಾಧಿಕಾರಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್  ಈ ಎಲ್ಲರಿಗೂ  ಪೆರಂಪಳ್ಳಿ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ.

 
 
 
 
 
 
 
 
 
 
 

Leave a Reply