ವೈದ್ಯಕೀಯ ಪ್ರಕೋಷ್ಠ ,ಆಯುಷ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಇಂಡಿಯನ್ ಜೇಸೀಸ್ ಪಡುಬಿದ್ರಿ ಘಟಕ ವತಿಯಿಂದ ಪರಿಸರ ದಿನಾಚರಣೆ

ಪಡುಬಿದ್ರೆ: ವೈದ್ಯಕೀಯ ಪ್ರಕೋಷ್ಠ ,ಆಯುಷ್ ಫೆಡರೇಷನ್ ಆಫ್ ಇಂಡಿಯಾ ಮತ್ತು ಇಂಡಿಯನ್ ಜೇಸೀಸ್ ಪಡುಬಿದ್ರಿ ಘಟಕ ಇದರ ವತಿಯಿಂದ ಇವತ್ತು ರಾಘವೇಂದ್ರ ಮಂದಿರ ಕಂಚಿನಡ್ಕ ಪಡುಬಿದ್ರಿ ಇಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಸಸಿ ನೆಡುವ ಕಾರ್ಯಕ್ರಮ ಜರಗಿತು . 

ಸ್ಥಳೀಯ ಶಾಸಕ ಲಾಲಾಜಿ ಆರ್ ಮೆಂಡನ್ ,ಉಡುಪಿ ಜಿಲ್ಲೆಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ರಾಮಚಂದ್ರ ಕಾಮತ್,ಪಡುಬಿದ್ರಿ ಪ್ರಥಮ ಪ್ರಜೆ ಲ. ರವಿ ಶೆಟ್ಟಿ ತಾಲೂಕು ಪಂಚಾಯತ್ ಸದಸ್ಯೆ ನೀತಾ ಗುರುರಾಜ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಡಾ ಗುರುಪ್ರಸಾದ್ ರಾವ್, ವಿಶ್ವ ಹಿಂದೂ ಅಧ್ಯಕ್ಷ ವಿಷ್ಣುಮೂರ್ತಿ ರಾವ್,ರಮಾಕಾಂತ್ ಪಡುಬಿದ್ರಿ ಜೇಸಿ ಅಧ್ಯಕ್ಷ ಶ್ರೀ ಶಿವಪ್ರಸಾದ್ ಉಪಸ್ಥಿತರಿದ್ದರು.

 ಶಾಸಕರು ಕಾರ್ಯಕ್ರಮದ ಕುರಿತು ಶ್ಲಾಘಿಸಿ ಮತ್ತು ಇಂಥಾ ಕಾರ್ಯಕ್ರಮ ಗಳಿಗೆ ಸರಕಾರದ ಸಹಾಯ ನೀಡುವ ಭರವಸೆ ವ್ಯಕ್ತಪಡಿಸಿದರು. ಡಾ. ರಾಮಚಂದ್ರ ಕಾಮತ್ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಡುಬಿದ್ರಿ ಜೇಸಿ ಅಧ್ಯಕ್ಷ ಸ್ವಾಗತಿಸಿ ಮತ್ತು ಡಾ. ಅಂಚನ್ ವಂದಿಸಿದರು.

 

 
 
 
 
 
 
 
 
 

Leave a Reply