ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವರಿಗೆ ರಜತ ಪಲ್ಲಕ್ಕಿ ಸಮರ್ಪಣೆ

ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವರಿಗೆ ಸಮರ್ಪಣೆಗೊಳ್ಳಲಿರುವ ರಜತ ಪಲ್ಲಕ್ಕಿಯ ಪುರ ಮೆರವಣಿಗೆಯು ಬಾರ್ಕೂರು ಕಲ್ಚಪ್ರದಿಂದ ಹೊರಟು ಪಂಚಲಿಂಗೇಶ್ವರ ದೇವಸ್ಥಾನ ದ ವರೆಗೆ ನಡೆಯಿತು, ಪಲ್ಲಕ್ಕಿಯ ಸೇವಾಕರ್ತರಾದ ವೇ.ಬ್ರಹ್ಮ ಶ್ರೀ ಹೃಷಿಕೇಶ ಬಾಯರಿ ಅವರು ರಜತ ಪಲ್ಲಕ್ಕಿಗೆ ಪುಷ್ಪ ಮಾಲೆಯನ್ನು ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು,ಈ ಸಂದರ್ಭದಲ್ಲಿ ಬಾರ್ಕೂರಿನ ಹಿರಿಯ ಮುತ್ಸದ್ದಿ, ನಿವೃತ್ತ ಅಧ್ಯಾಪಕರಾದ ಸುಧಾಕರ ರಾವ್ ಶುಭಾಶಂಸನೆಗೈದರು, ಬಾರ್ಕೂರಿನ ಗ್ರಾಮಸ್ಥರು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು, ಬಾರ್ಕೂರಿನ ಸೀಮೆ ಒಡೆಯನಾದ ಪಂಚಲಿಂಗೇಶ್ವರ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply