13 ವರ್ಷದಿಂದ ಲಾರಿ ಒಣಹುಲ್ಲು ಖರೀದಿಸಿ ಗೋಶಾಲೆಗೆ ನೀಡುತ್ತಿರುವ ಕುಂಜಾಲು ನಿವಾಸಿಯ ಮಾದರಿ ಗೋಸೇವೆ

ಉಡುಪಿ: ಬ್ರಹ್ಮಾವರ ತಾಲೂಕು ವ್ಯಾಪ್ತಿಯ ನೀಲಾವರ ಗ್ರಾಮದ ಕುಂಜಾಲು ನಿವಾಸಿ ರಾಮಚಂದ್ರ ರಾವ್ ಕಳೆದ ಹದಿಮೂರು ವರ್ಷಗಳಿಂದ ಒಂದು ಲಾರಿ ಲೋಡ್ ಒಣ ಹುಲ್ಲನ್ನು ಖರೀದಿಸಿ ನೀಲಾವರ ಗೋಶಾಲೆಗೆ ಸದ್ದಿಲ್ಲದೇ ಒಪ್ಪಿಸುತ್ತಿರುವ ಮಾದರಿ ಕಾರ್ಯದ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯ ಮೂರನೇ ದರ್ಜೆಯ ಆರೋಗ್ಯ ಸಹಾಯಕ ಹುದ್ದೆಯ ನಿವೃತ್ತ ನೌಕರ ರಾಮಚಂದ್ರ ರಾವ್ ತನ್ನೂರಿನ‌ಲ್ಲೇ ಈ ಗೋಶಾಲೆ ಇದ್ದರೂ ಒಮ್ಮೆಯೂ ನೋಡಿರಲಿಲ್ಲ.

ಒಮ್ಮೆ ಹೀಗೇ ರಸ್ತೆಯಂಚಿನಲ್ಲೇ ಇರುವ ಮನೆ ಮುಂದೆ ನಿಂತಿರುವಾಗ ಬೆಂಗಳೂರಿನ ಭಕ್ತರಿಬ್ಬರು ಕಾರ್ ನಲ್ಲಿ ಆ ರಸ್ತೆಯಲ್ಲಿ ಬಂದವರೇ ಅವರನ್ನು ಕಂಡು ಗೋಶಾಲೆಗೆ ಹೋಗುವ ದಾರಿಯ ಬಗ್ಗೆ ಕೇಳಿದ್ರಂತೆ.‌ಕೊನೆಗೆ ತಾನೇ ಅವರ ಜೊತೆ ಕಾರಲ್ಲಿ ಗೋಶಾಲೆ ತೋರಿಸುವ ನಿರ್ಧಾರ ಮಾಡಿ ಕರೆದುಕೊಂಡು ಹೋಗ್ತಾರೆ .‌ಆದ್ರೆ ಅಲ್ಲಿನ ಗೋಶಾಲೆ ಕಂಡವರೇ ಸ್ವಾಮೀಜಿಯವರು ತಮ್ಮೂರಲ್ಲಿ ಇಷ್ಟು ದೊಡ್ಡ ಗೋಶಾಲೆ ಕಟ್ಟಿ ಇಷ್ಟೊಂದು ಹಸುಗಳನ್ನು ಯಾವ ಆದಾಯವೂ ಇಲ್ಲದೇ ಪೋಷಿಸುತ್ತಿದ್ದರೂ ತಾನು ಈ ತನಕ ಇದನ್ನು ನೋಡಿಯೂ ಇಲ್ಲದಿರುವ ಬಗ್ಗೆ ಮನಸ್ಸಲ್ಲೇ ಮುಜುಗರ ಪಟ್ಟಿದ್ದರಂತೆ.

ಅಲ್ಲಿಂದ ಬಂದ ನಾಲ್ಕೈದು ದಿನಗಳಲ್ಲೇ ತನ್ನ ಪಿಂಚಣಿಯ ಉಳಿತಾಯದ ಹಣದಲ್ಲಿ ಒಂದು ಲಾರಿ ಲೋಡ್ ನಷ್ಟು ಹುಲ್ಲನ್ನು ಖರೀದಿಸಿ ಗೋಶಾಲೆಗೆ ಕೊಟ್ಟು ಸಂತೋಷ ಪಡ್ತಾರೆ. ವಿಷಯವನ್ನು ಹೆಂಡ್ತಿ ಮಕ್ಕಳಿಗೂ ತಿಳಿಸಿದಾಗ ಅವರೂ ಬೆಂಬಲ ಸೂಚಿಸ್ತಾರೆ.ಇಲ್ಲಿ ತನಕ ನಿರಂತರವಾಗಿ ಪ್ರತೀ ವರ್ಷ ಒಂದು ಲಾರಿ ಲೋಡ್ ನಷ್ಟು ಹುಲ್ಲನ್ನು ಗೋಶಾಲೆಯ ಗೋವುಗಳಿಗೆ ಅರ್ಪಿಸುವ ಪರಿಪಾಠ ಇಟ್ಕೊಂಡಿದ್ದಾರೆ. ಒಂದು ವೇಳೆ ಸ್ಥಳೀಯವಾಗಿ ಹುಲ್ಲು ಸಿಗದಿದ್ರೆ ಹೊನ್ನಾಳಿ ಸಾಗರ ತೀರ್ಥಳ್ಳಿಗಳಿಂದಾದ್ರೂ ಖರೀದಿಸಿ ಕೊಡ್ತಾರೆ.

 

 

 
 
 
 
 
 
 
 
 
 
 

Leave a Reply