ಉಡುಪಿ ಬ್ರಹ್ಮಗಿರಿ ಶಂಕರ ಪ್ಲಾಜಾದಲ್ಲಿ ಹೋಟೆಲ್ ಶ್ರೀಕೃಷ್ಣಪ್ರಸಾದ್ ಶುಭಾರಂಭ

ಉಡುಪಿ: ಇಲ್ಲಿನ ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಬಳಿ ೪೦ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ  ಶ್ರೀಕೃಷ್ಣಪ್ರಸಾದ್ ಹೋಟೆಲ್ ನ್ನು ಬ್ರಹ್ಮಗಿರಿ ಬಳಿಯ ಶಂಕರ ಪ್ಲಾಜಾ ಕಟ್ಟಡಕ್ಕೆ ಸ್ಥಳಾಂತರ ಗೊಂಡು ಗುರುವಾರದಂದು ಶುಭಾರಂಭಗೊಂಡಿತು. ಧಾರ್ಮಿಕ ಪರಿಷತ್ ಮಾಜಿ ಸದಸ್ಯ, ಆಗಮ ಪಂಡಿತ ವೇದಮೂರ್ತಿ ಕುತ್ಯಾರು ಶ್ರೀಧರ ತಂತ್ರಿ ನೇತೃತ್ವದಲ್ಲಿ ಪ್ರಾಸಾದ ಶುದ್ಧಿ, ನಾಂದಿ ಪುಣ್ಯಾಹ, ಗಣಹೋಮ ನಡೆಯಿತು. ಬಳಿಕ ಲಕ್ಷ್ಮೀಪೂಜೆ ನಡೆಸಲಾಯಿತು. 

ಧಾರ್ಮಿಕ ವಿಧಿವಿಧಾನಗಳು ನಡೆದ ಬಳಿಕ ಲೋಕೋಪಯೋಗಿ ಇಲಾಖಾ ನಿವೃತ್ತ ಅಭಿಯಂತರ ಯು. ರಮೇಶ ರಾವ್ ಜ್ಯೋತಿ ಬೆಳಗಿಸಿ ಶುಭ ಹಾರೈಸಿದರು. ಈ  ಸಂದರ್ಭದಲ್ಲಿ ಡಾ.ಮೋಹನ ದಾಸ ಭಟ್, ಕುಕ್ಕಿಕಟ್ಟೆ ಕೃಷ್ಣರಾಜ ತಂತ್ರಿ, ಬೆಳ್ಳೆ ನರಸಿಂಹ ಸಾಮಗ, ಮಾತೃಶ್ರೀ ಸೂರ್ಯ ಕುಮಾರಿ ಭಟ್, ಶಕುಂತಳಾ ಭಟ್, ಅರವಿಂದ ಭಟ್, ಗಣಪತಿ ಭಟ್, ಶ್ರೀಪತಿ ಉಪಾಧ್ಯ ಮೊದಲಾದವರಿದ್ದರು.

ಕಳೆದ ಸುಮಾರು 4 ದಶಕಗಳಿಂದ ಉಡುಪಿಯಲ್ಲಿ ಮನೆಮಾತಾಗಿರುವ ಹೋಟೆಲ್ ಶ್ರೀಕೃಷ್ಣಪ್ರಸಾದ್ ಶುಚಿ ರುಚಿಯ ಊಟ, ಉಪಾಹಾರಕ್ಕೆ ಹೆಸರಾಗಿದ್ದು, ಇದೀಗ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳುಳ್ಳ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ. ಮುಂಬರುವ ದಿನಗಳಲ್ಲಿ ಚಾಟ್ಸ್ ಮುಂತಾದ ವ್ಯವಸ್ಥೆಗಳನ್ನು  ಆರಂಭಿಸ ಲಾಗುವುದು. ಈಗಾಗಲೇ ನಂದಿನಿ ಉತ್ಪನ್ನಗಳ ಅಧಿಕೃತ ಮಾರಾಟ ವ್ಯವಸ್ಥೆಯೂ ಇಲ್ಲಿದೆ ಎಂದು ಮಾಲೀಕ ಕುತ್ಯಾರು ನಾಗೇಶ ಭಟ್ ತಿಳಿಸಿದರು.

 
 
 
 
 
 
 
 
 
 
 

Leave a Reply