ಎಂ. ಪಿ. ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ

ಕಾರ್ಕಳ : ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಕಾರ್ಯಕ್ರಮವು ಎಂ. ಪಿ. ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆರವೇರಿತು.

ಸಂಪನ್ಮೂಲ ವ್ಯೆಕಿಗಳಾಗಿ ಪ್ರೊಪೆಸರ್ ರಾಜ್ ಶೇಖರ್ ಹೆಬ್ಬಾರ್ ಆಗಮಿಸಿದ್ದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ “ಕನಸಿಗಿಂತ ಮಹತ್ವವಾದದ್ದು ಅವರ ಸಾಧನೆ ಇರಬೇಕೆಂದು”ಹಿತ ನುಡಿಗಳನ್ನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರು ಪ್ರೊಪೆಸರ್ ವರ್ಮಾ ಅಜ್ರಿ ವಿದ್ಯಾರ್ಥಿಗಳ ಕುರಿತು ಹಿತ ನುಡಿಗಳನ್ನಾಡಿದರು. ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಎಮ್. ಕಾಂ ವಿಭಾಗದ ಸಂಯೋಜಕ ವಿದ್ಯಾದರ್ ಹೆಗ್ಡೆ ಹಾಗೂ ಐಕ್ಯೂ ಎಸಿ ಸಂಚಾಲಕಿ ಜ್ಯೋತಿ ಎಲ್. ಜನ್ನೇ ಮತ್ತು ವಿದ್ಯಾರ್ಥಿ ನಾಯಕರುಗಳಾದ ಮನೀಶ್ ಕುಲಾಲ್, ಅಜಿತ್, ವಿಷ್ಣು, ಮುಕ್ತಿವರ್ದನ, ಧನ್ಯಶ್ರೀ, ವೈಷ್ಣವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕರಿಂದ ಪ್ರತಿಜ್ಞಾ ಸ್ವೀಕಾರ ಮಾಡಲಾಯಿತು.

ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮನೀಶ್ ಕುಲಾಲ್ ಸ್ವಾಗತಿಸಿದರು , ವೈಷ್ಣವಿ ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ನೀಡಿ, ಧನ್ಯಶ್ರೀ ವಂದಿಸಿದರು.ಅಜಿತ್ ನಿರೂಪಿಸಿದರು. 

 
 
 
 
 
 
 
 
 

Leave a Reply