ಮೂಡೂರು ನಾಗಬ್ರಹ್ಮಸ್ಥಾನದ ಅಭಿವೃದ್ದಿಗೆ ಚಾಲನೆ ಮತ್ತು ಡೈರಕ್ಟರಿ ಬಿಡುಗಡೆ ಕಾರ್ಯಕ್ರಮ

ಕೊಕ್ಕರ್ಣೆ:ಮೂಡೂರು ನಾಗಬ್ರಹ್ಮಸ್ಥಾನದ ಅಭಿವೃದ್ದಿಗೆ ಚಾಲನೆ ಮತ್ತು ಡೈರಕ್ಟರಿ ಬಿಡುಗಡೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿ ಮೂಲಸ್ಥಾನದ ನಂಟು ಪವಿತ್ರವಾಗಿದ್ದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. 

ಕ್ಷೇತ್ರ ತಂತ್ರಿ ವೇದಮೂರ್ತಿ ಹಲುವಳ್ಳಿ ಸೀತರಾಮ ಅಡಿಗರು ಶುಭಶಂಸನೆಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮೂಡೂರು ಮನೋಹರ ಶೆಟ್ಟಿ ಕ್ಷೇತ್ರದ ಅಭಿವೃದ್ಧಿಗೆ ಸರ್ವರ ಸಹಾಯಕ್ಕೆ ಮನವಿ ಮಾಡಿದರು. 

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶೇಡಿಮನೆ ಗೋಪಾಲ ಶೆಟ್ಟಿ ಇವರು ಮೂಡುರು ಕೀರ್ತಿ ಶೇಷ, ಮೂಡೂರು ಶ್ಯಾಮರಾಜ ಹೆಗ್ಡೆ ಸ್ಮರಣಾರ್ಥ ಡೈರಕ್ಟರಿ ಬಿಡುಗಡೆ ಮಾಡಿ ಸಂಪರ್ಕದಿಂದ ಸಂಬಂಧ ಬೆಳೆದು ಕುಟುಂಬಿಕರ ಒಗ್ಗಟಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ರಾಷ್ಟೃಪ್ರಶಸ್ತಿ ಶಿಕ್ಷಕ ಕುದಿ ವಸಂತ ಶೆಟ್ಟಿ ದೈವರಾಧನೆಯ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ಕನ್ನಾರು ಕಮಲಾಕ್ಷ ಹೆಬ್ಬಾರ್, ರೇಶ್ಮಾ ದೇವಿಪ್ರಸಾದ ಶೆಟ್ಟಿ, ಮೂಡೂರು ಭಾಸ್ಕರ ಹೆಗ್ಡೆ, ದಿನಕರ ಶೆಟ್ಟಿ, ಉಪಸ್ಥಿತರಿದ್ದರು. ಕಮಲಾಕ್ಷ ನಿರೂಪಿಸಿ ಮಧುಸೂಧನ ಶೆಟ್ಟಿ ವಂದಿಸಿದರು. 

 
 
 
 
 
 
 
 
 
 
 

Leave a Reply