ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಪುನರ್ಮಿಲನ

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಉಡುಪಿ 1978-79 ಬಿಕಾಂ ಸಹಪಾಠಿಗಳು ತಾರೀಕು 24.11.2022 ಗುರುವಾರ ಉಪ್ಪಿನಕೋಟೆ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟಲ್ಲಿ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ನೆರವೇರಿತು. ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಪ್ರಿನ್ಸಿಪಾಲ್ Dr.ವಿನ್ಸೆಂಟ್ ಆಳ್ವ ಹಾಗೂ ರಘುನಂದನ್ ಭಟ್ ಉಪಸ್ಥಿತರಿದ್ದು Dr. ವಿನ್ಸೆಂಟ್ ಆಳ್ವ ಅವರು ಸಾಂಧರ್ಭಿಕವಾಗಿ ಮಾತನಾಡಿ 43 ವರ್ಷದ ನಂತರ ಇಷ್ಟು ಹೆಚ್ಚು ಸಂಖ್ಯೆಯಲ್ಲಿ ಒಗ್ಗೂಡಿದ ಕಾಲೇಜಿನ ಹಳೆ ವಿಧಾರ್ಥಿಗಳಿಗೆ ಹಿತವಚನ ನೀಡಿ ಶುಭ ಹಾರೈಸಿದರು. ದಿನವಿಡೀ ನಡೆದ ಸಂತೋಷ ಕೂಟದಲ್ಲಿ ಶ್ರೀ ನರಸಿಂಹ ಮೂರ್ತಿ ಟಿ , ಶ್ರೀ ಥಾಮಸ್ ಡಿಸೋಜ, ಶ್ರೀ ರಾಘವೇಂದ್ರ ಭಟ್, ಶ್ರೀ ಜಯಂತ ನಾಯಕ್, ಶ್ರೀ ವಾಮನ ಸುವರ್ಣ, ಶ್ರೀ ಶೇಖರ ಪೂಜಾರಿ, ಶ್ರೀಮತಿ ಜೋಸ್ಲೀನ್ ಲುವಿಸ್ , ಶ್ರೀಮತಿ ರಮಾದೇವಿ, ಶ್ರೀಮತಿ ಡೆನ್ಜಿಲ್ ಬ್ರಿಟ್ಟೊ, ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀಮತಿ ಜಾಯ್ಸ್ ಸಲ್ದಾನ ಉತ್ಸಾಹದಿಂದ ವಿವಿಧ ಸ್ಪರ್ಧೆ ಹಾಗೂ ವಿನೋದಾವಳಿಗಳಿಂದ ಎಲ್ಲರನ್ನೂ ರಂಜಿಸಿದರು. ಸ್ನೇಹ ಹಾಗೂ ಸಮ್ಮಿಲನಗಳಿಂದ ಸಂತೋಷವನ್ನು ಹೊಂದುವುದು ಸಾಧ್ಯ ಎನ್ನುವುದನ್ನು ತೋರಿಸಿಕೊಡುವಲ್ಲಿ ಈ ಹಳೆ ವಿದ್ಯಾರ್ಥಿ ಪುನರ್ಮಿಲನ ಕಾರ್ಯಕ್ರಮ ಯಶಸ್ವಿ ಆಯಿತು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply