ಮಂಗಳೂರು: ​ಅದ್ದೂರಿ ಗಣೇಶೋತ್ಸವ ಆಚರಣಿಗೆ ಅವಕಾಶವಿಲ್ಲ

ಮಂಗಳೂರು: ದ.ಕ.ಜಿಲ್ಲೆಯಲ್ಲಿ​ ನಡೆಯುತ್ತಿದ್ದ ಅದ್ದೂರಿ ಸಾರ್ವಜನಿಕ ಗಣೇಶೋತ್ಸವಕ್ಕೆ​ ಜಿಲ್ಲಾಡಳಿತ ಬ್ರೇಕ್‌ ಹಾಕಿದೆ.​ 

ದ.ಕ ಜಿಲ್ಲಾ ವಿಪತ್ತು ನಿರ್ವಹಣಾ​ ​ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ​ ಕೈಕೈಗೊಳ್ಳಲಾಗಿದ್ದು​ಜಿಲ್ಲೆಯಲ್ಲಿ ​ಈ ಬಾರಿ ಸರಳ ಗಣೇಶೋತ್ಸವ ಆಚರಣೆ ಇರಲಿದೆ.ಪೆಂಡಾಲ್‌ ಹಾಕಿ ಸಾರ್ವಜನಿಕ ಪ್ರದೇಶಗಳಲ್ಲಿ ​ಗಣೇಶೋತ್ಸವ ಆಚರಣೆಗೆ ಅವಕಾಶ ಇಲ್ಲ. 

​ಜಿಲ್ಲೆಯಲ್ಲಿ ಮೂರು ದಿನಗಳಿಗೆ​ ಗಣೇಶೋತ್ಸವ ಸೀಮಿತವಾಗಿರಲಿದೆ. ದೇವಸ್ಥಾನ, ಸಮುದಾಯ ಭವನ ಹಾಗೂ​ ಮನೆಗಳಲ್ಲಿ ಮಾತ್ರ ಸರಳ ಆಚರಣೆಗೆ​ ಅವಕಾಶವಿದ್ದು, ಜಿಲ್ಲೆಯಲ್ಲಿ ಈ ಸೂಚನೆ ನೀಡಲಾಗಿದೆ​​.

 
 
 
 
 
 
 
 
 
 
 

Leave a Reply