ಬೃಹತ್ ಅಲೆ ಅಪ್ಪಳಿಸಿ ಹೆಜಮಾಡಿಯಲ್ಲಿ ಮೀನುಗಾರ ಮೃತ್ಯು

ಪಡುಬಿದ್ರಿ: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಓರ್ವ ಮೀನುಗಾರ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆಜಮಾಡಿ ಅಳಿವೆ ಬಾಗಿಲಿನಲ್ಲಿ ನಡೆದಿದೆ.

ಹೆಜಮಾಡಿ ಕೋಡಿ ಮಾನಂಪಾಡಿಯ ಜಯಂತ (45) ಮೃತಪಟ್ಟಿದ್ದು,ಇಂದು ಮುಂಜಾನೆ ಅಳಿವೆ ಬಾಗಿಲು ಸಮೀಪ ಮೀನುಗಾರಿಕೆಯಲ್ಲಿ ನಿರತರಾಗಿದ್ದರು. ಈ ವೇಳೆ ಏಕಾಏಕಿ ಮೇಲೆದ್ದ ಬೃಹತ್ ಅಲೆ ಮೀನುಗಾರನಿಗೆ ಅಪ್ಪಳಿಸಿದೆ. ಅಲೆಯ ಘಾತಕ ಪ್ರಹಾರದಿಂದಾಗಿ ಮೀನುಗಾರ ದೋಣಿಯಿಂದ ನೀರಿಗೆ ಬಿದ್ದಿದ್ದು, ಈಜಲೂ ಸಾಧ್ಯವಾಗದೆ ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರಿಗೆ ಪತ್ನಿ ಹಾಗೂ 4 ಮಕ್ಕಳಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಎಸ್ ಐ ದಿಲೀಪ್, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಸದಸ್ಯ ಶರಣ್ ಕುಮಾರ್ ಮಟ್ಟು ಮತ್ತಿತರರು ಭೇಟಿ ನೀಡಿದರು. ಮೃತದೇಹವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. 

 
 
 
 
 
 
 
 
 
 
 

Leave a Reply