ಮಲ್ಪೆ ಸಿ ವಾಕ್ ಬಳಿ ಜಿಲ್ಲಾಡಳಿತದಿಂದ ಹೊಸ ಲೋಕ ಸೃಷ್ಟಿ 

ಉಡುಪಿ:  ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ ಇವರ ವತಿಯಿಂದ ಮಲ್ಪೆ ಸೀ-ವಾಕ್ ಬಳಿಯ ಬಯಲು ರಂಗಮಂದಿರ ಹಾಗೂ ಉದ್ಯಾನವನದ ಉದ್ಘಾಟನಾ ಸಮಾರಂಭವು ಇಂದು, ಡಿಸೆಂಬರ್ 3ರಂದು ಸಂಜೆ 5.30 ಕ್ಕೆ ನಡೆಯಲಿದೆ.   
ಶಾಸಕ ರಘುಪತಿ ಭಟ್ ಅಧ್ಯಕ್ಷತೆಯೊಂದಿಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿರುವರು.  
ವಿಶಿಷ್ಟ ಕಲಾಕೃತಿಗಳೊಂದಿಗೆ ಕಲಾವಿದ ಪುರುಷೋತ್ತಮ ಆಡ್ವೇ ಅಂತಿಮ ಸ್ಪರ್ಶ ನೀಡಿದ್ದಾರೆ. ಶಾಸಕ ರಘುಪತಿ ಭಟ್ ರವರ ವಿಶೇಷ ಆಸಕ್ತಿಯಿಂದ, ಜಿಲ್ಲಾಡಳಿತವು  ನಿಗದಿತ ಸಮಯದಲ್ಲಿ ಹೊಸ ಪರಿಸರವನ್ನು ಮೂಡಿಸಿದೆ. ಜಿಲ್ಲಾಧಿಕಾರಿ ಜಿ. ಜಗದೀಶ್ ಈ ವಿಷಯದಲ್ಲಿ ಬಹಳ ಕಾಳಜಿ ವಹಿಸಿ ಅನುಷ್ಠಾನ ಗೊಳಿಸಿದ್ದಾರೆ. ನಿರ್ಮಿತಿಯಿಂದ ನಿರ್ಮಿಸಲಾದ ಈ ಪರಿಸರ ಪ್ರವಾಸಿಗರನ್ನು ಕೈ ಬಿಸಿ ಕರೆಯುವಂತೆ ಹೊಸ ಲೋಕವೇ ಸೃಷ್ಟಿಯಾಗಿದೆ.  
 
 
 
 
 
 
 
 
 
 
 

Leave a Reply