ಮಲ್ಪೆ ಸಮೀಪದ ಕಲ್ಮಾಡಿಯಲ್ಲಿ ಇಂದು ನಡೆದ ಬಸ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ದಂಪತಿ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.
ರಮಾನಂದ (35ವ) ಮತ್ತು ಅವರ ಪತ್ನಿ ರಿಮ (33ವ) ಗಾಯಗೊಂಡ ದಂಪತಿಯಾಗಿದ್ದಾರೆ.
ಕಲ್ಮಾಡಿ ಸಮೀಪ ಇವರು ಬೈಕಿನಲ್ಲಿ ತಮ್ಮ ಮಗನ ಸಮೇತ ಹೋಗುತ್ತಿದ್ದಾಗ ಖಾಸಗಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ.
ರಕ್ತದ ಮಡುವಿನಲ್ಲಿ ರಸ್ತೆಗೆ ಬಿದ್ದಿದ್ದ ಇವರನ್ನು ಆಪಾದ್ಬಾಂಧವ ಈಶ್ವರ್ ಮಲ್ಪೆ , ಉಡುಪಿ ನಗರದ ಆದರ್ಶ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಾಗಿಸಿ ಮಾನವೀಯತೆ ಮೆರೆದರು.
ಇವರ ಸಕಾಲಿಕ ನೆರವಿನಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕಿನಲ್ಲಿದ್ದ ದಂಪತಿ ಪುತ್ರ ಸಣ್ಣಪುಟ್ಟ ತರಚು ಗಾಯಗಳಿಂದ ಪಾರಾಗಿದ್ದು ಮಲ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.