ಶಿರ್ವ:-ಕ್ರೈಸ್ತ ಸಮುದಾಯದ ವಿಶ್ರಾಂತ ಉದ್ಯಮಿ, ಸಿದ್ಧಿವಿನಾಯಕನ ಭಕ್ತ ಶಿರ್ವ ಗ್ಯಾಬ್ರಿಯಲ್ ನಜ್ರೆತ್ ತಮ್ಮ ಮಾತಾಪಿತರ ನೆನಪಿಗಾಗಿ ಕಟ್ಟಿಸಿ ಹಿಂದುಗಳಿಗೆ ಸಮರ್ಪಿಸಿದ ನೂತನ ಶಿಲಾಮಯ ಶ್ರೀಸಿದ್ಧಿವಿನಾಯಕ ದೇವಳಕ್ಕೆ ಮಂಗಳವಾರ ಆಷಾಡ ಏಕಾದಶಿ ದಿನದಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ನೀಡಿದರು.
ದೇವಾಲಯದ ವತಿಯಿಂದ ಶಾಸಕರಿಗೆ ದೇವಳದ ನಿರ್ಮಾತೃ ಗ್ಯಾಬ್ರಿಯಲ್ ನಜ್ರೆತ್, ವಾಸ್ತುಶಿಲ್ಪಿ ನಾಗೇಶ ಹೆಗಡೆ, ಅರ್ಚಕ ನರಸಿಂಹ ಭಟ್ ಶಾಲುಹೊದಿಸಿ ಶ್ರೀದೇವರ ಪ್ರಸಾದ ನೀಡಿ ಹರಸಿದರು. ಬಳಿಕ ಮಾತನಾಡುತ್ತ ಗ್ಯಾಬ್ರಿಯಲ್ ನಜ್ರೆತ್ರವರು ತಮ್ಮ ಸ್ವಂತ ಜಮೀನಿನಲ್ಲಿ ಶಾಸ್ತ್ರೋಕ್ತವಾಗಿ ಕಟ್ಟಿಸಿ ಸಮಸ್ತಭಕ್ತರಿಗೆ ಸಮರ್ಪಿಸಿದ ದೇವಾಲಯ ಉಡುಪಿ ಜಿಲ್ಲೆಗೆ ಹಾಗೂ ಕಾಪು ಕ್ಷೇತ್ರಕ್ಕೆ ವಿಶೇಷ ಮೆರುಗು ನೀಡಿದೆ ಎಂದರು.
ಸತೀಶ್ ಶೆಟ್ಟಿ ಮಲ್ಲಾರು, ಚೇತನ್ಕುಮಾರ್, ರಾಜೇಶ ಪೂಜಾರಿ, ಜಯಂತಕುಮಾರ್, ರಾಜೇಶ್ ನಾಯ್ಕ್, ಗಿರಿಧರ ಪ್ರಭು, ಗ್ರಾ.ಪಂ.ಸದಸ್ಯ ಶ್ರೀನಿವಾಸ ಶೆಣೈ, ಪ್ರವೀಣ್ ಸಾಲಿಯಾನ್, ವೀರೇಂದ್ರ ಪಾಟ್ಕರ್, ನಿತಿನ್ ನಾಯಕ್, ಪ್ರಶಾಂತ್ ಪಾಲಮೆ, ಸುರಂದ್ರ ಪೂಜಾರಿ, ರವೀಂದ್ರ ಪಾಟ್ಕರ್,ಮೊದಲಾದವರು ಉಪಸ್ಥಿತರಿದ್ದರು.