ಕಲಾಶಿಕ್ಷಕ ವೆಂಕಟರಮಣ ಕಾಮತ್ ಗೆ ವೃತ್ತಿ ಸೇವಾ ಪ್ರಶಸ್ತಿ

ಉಡುಪಿ : ರೋಟರಿ ಕ್ಲಬ್ ಮಣಿಪಾಲ ವತಿಯಿಂದ ಜನವರಿ ತಿಂಗಳು ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3182 ನೀಡುವ ವೃತ್ತಿ ಸೇವಾ ಪ್ರಶಸ್ತಿಯನ್ನು ಕಲಾಶಿಕ್ಷಕ ವೆಂಕಟರಮಣ ಕಾಮತ್ ಗೆ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲೆಯ ವೃತ್ತಿ ಸೇವಾ ಚೇರ್ಮನ್ ರೋ. ಪುಂಡಲೀಕ ಮರಾಠೆ ಮಾತನಾಡಿ ಕಲೆಯಿಂದ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕೆಲಸವನ್ನು ವೆಂಕಿ ಮಾಡುತ್ತಿರುವುದು ಶ್ರೇಷ್ಠ ಕೆಲಸವಾಗಿದೆ ಎಂದರು. ಅವರಿಗೆ ರೋಟರಿ ಸೇವಾ ಪ್ರಶಸ್ತಿ ನೀಡಿರುವುದು ಸಂತೋಷವಾಗಿದೆ ಎಂದು ತಿಳಿಸಿದರು.

 

ಕಾರ್ಯಕ್ರಮದಲ್ಲಿ ರೋಟರಿಕ್ಲಬ್ ಮಣಿಪಾಲದ ಹಲವಾರು ರೋಟರಿಯನ್ನರು ಮತ್ತು ಮನೆಯವರು ಹಾಗೂ ವೆಂಕಿ ಪಲಿಮಾರು ಅವರ ಶಿಷ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply