ಕೊಡವೂರು ತೀರ್ಥ ಗ್ರಾಮ – ವಿನಾಯಕ್ ರಾವ್

ಉಡುಪಿ : ಕೊಡವೂರು ವಾರ್ಡ್ ನಲ್ಲಿ ಕನಕ ಜಯಂತಿಯನ್ನು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ಆಚರಿಸಲಾಯಿತು.

ಈ ಸಂಧರ್ಬದಲ್ಲಿ ಮಾತನಾಡಿದ ಸೇವಾ ಭಾರತಿ ಕನ್ಯಾಡಿ (ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಪುನಃ ಚೇತನ ಕೇಂದ್ರ) ಇದರ ಅಧ್ಯಕ್ಷರಾಗಿರುವ ವಿನಾಯಕ ರಾವ್ ಮಾತನಾಡಿ ಉಡುಪಿ ನಗರ ಸಭೆಯಲ್ಲಿ ಒಂದಾದ ಕೊಡವೂರು ವಾರ್ಡ್ ಸರಕಾರದ ಅನುದಾನವನ್ನು ಪಡೆಯುವುದರ ಜೊತೆಗೆ ಸೇವಾ ಕಾರ್ಯದ ಮುಖಾಂತರ 28,92,515.00 ರೂಪಾಯಿಯ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡಬೇಕೆಂದು ಯೋಚಿಸಿ ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ರಚಿಸಿ ಕೃಷಿ, ಅಂಗವಿಕಲರಿಗೆ, ನಿರುದ್ಯೋಗಿಗಳಿಗೆ, ಅದಕ್ಕಿಂತಲೂ ಮುಖ್ಯವಾಗಿ ತ್ಯಾಜ್ಯಮುಕ್ತ , ವ್ಯಸನಮುಕ್ತ, ರಾಸಾಯನಿಕ ಮುಕ್ತ, ಗ್ರಾಮ ಮಾಡುವ ಉದ್ದೇಶದಿಂದ ಕಾರ್ಯಕರ್ತರೆಲ್ಲರೂ ಸೇರಿ ನಡೆಸುತ್ತಿದ್ದಾರೆ ಕೇವಲ ಒಬ್ಬ ವ್ಯಕ್ತಿಯಿಂದ ಮಾತ್ರವಲ್ಲ ಇದಕ್ಕೆ ಪಕ್ಷಭೇದ ಮರೆತು ಊರಿನ ಎಲ್ಲರೂ ಸಹಕರಿಸುತ್ತಿರುವುದು ಮಾದರಿ ಗ್ರಾಮದ ಲಕ್ಷಣ ತಿಳಿಯುತ್ತಿದೆ ಎಂದು ವಿನಾಯಕ ರಾವ್ ತಿಳಿಸಿದರು.

ಯಾವುದೇ ಮನೆಯಲ್ಲಿ ಜಗಳವಾದರೆ ಪೊಲೀಸ್ ಠಾಣೆಗೆ ಹೋಗುವ ಮುಂಚೆ ಊರಿನ ನ್ಯಾಯ ಸಮಿತಿಯ ಹಿರಿಯರ ಮುಖಾಂತರ ಸಂಧಾನ ಕಾರ್ಯ ನಡೆಯುತ್ತದೆ. ಇದು ಊರಿನ ಎಲ್ಲಾ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯ್ ಕೊಡವೂರು ಮಾತನಾಡಿ ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದುರ್ಬಲರಿಗೆ, ಅನಾಥರಿಗೆ, ದಿವ್ಯಾಂಗರಿಗೆ, ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಇದುವರೆಗೆ ಬೇಕಾಗುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲಾಗಿದೆ. 

ಮನೆ ಕಟ್ಟಲು ಸಿಮೆಂಟ್,ಸ್ವಂತ ಉದ್ಯೋಗಕ್ಕಾಗಿ, ಟೈಲರಿಂಗ್ ಮಷೀನ್, ಬತ್ತಿ ಕಟ್ಟುವ ಮಷೀನ್, ದುಡಿಯಲು ಸಾದ್ಯವಿಲ್ಲದಿರುವ ದಿವ್ಯಾಂಗರಿಗೆ ಪ್ರತೀ ತಿಂಗಳು ಅಕ್ಕಿ ವಿತರಣೆ, ಇದಕ್ಕೆ ಊರಿನ ದಾನಿಗಳು ಸಹಕಾರ ನೀಡಿದ್ದಾರೆ.

ಇದೇ ರೀತಿ ಮುಂದಿನ ದಿನಗಳಲ್ಲಿ ನಮ್ಮ ವಾರ್ಡಿನ ಎಲ್ಲರಿಗೂ ಆರೋಗ್ಯದ ದೃಷ್ಟಿಯಿಂದ ಮನೆ ಮನೆಗೆ ತೆರಳಿ ಗುಜರಿ ಸಾಮಗ್ರಿಗಳನ್ನು ದಿವ್ಯಾಂಗ ರಕ್ಷಣಾ ಸಮಿತಿ ಅದನ್ನು ಸ್ವೀಕರಿಸಲಾಗುವುದು.

ನಿಮ್ಮ ಮನೆಯಲ್ಲಿರುವ ಹಳೆಯ ಪ್ಲಾಸ್ಟಿಕ್ ,ಕಬ್ಬಿಣ ,ಪೇಪರ್ ಗಳಿದ್ದರೆ ರಕ್ಷಣಾ ಸಮಿತಿಯ ಪ್ರಮುಖರಿಗೆ ತಿಳಿಸಿದ್ದಲ್ಲಿ ಗುಜರಿ ಸಾಮಗ್ರಿಗಳನ್ನು ಪಡೆದುಕೊಂಡು, ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ದಿವ್ಯಾಂಗರು ಊರಿನ ದುರ್ಬಲರ ಸೇವೆಯನ್ನು ಮಾಡಲು ಸಿದ್ಧವೆಂದು ತೊಡೆತಟ್ಟಿರುವುದು ಸಂತೋಷದ ವಿಷಯ ಈ ನಿಟ್ಟಿನಲ್ಲಿ ಗ್ರಾಮಸ್ಥರು, ಉಡುಪಿಯ ನಾಗರಿಕರು ಸಹಕರಿಸಬೇಕು ವಿಜಯ್ ಕೊಡವೂರು ನಗರ ಸಭಾ ಸದಸ್ಯರು ವಿನಂತಿಸಿದರು.

ಕನಕ ಜಯಂತಿಯ ಸಂದರ್ಭದಲ್ಲಿ ಧರ್ಮ ರಕ್ಷಣೆಯ ಕಾರ್ಯವನ್ನು ಕನಕರು ಶ್ರೀ ಕೃಷ್ಣನನ್ನು ಭಕ್ತಿಯಿಂದ ತಿರುಗಿಸುವ ಕೆಲಸವನ್ನು ಮಾಡಿದ್ದಾರೆ ಅದೇ ಆದರ್ಶವನ್ನು ನಾವು ಇಟ್ಟುಕೊಳ್ಳಬೇಕು ಭಕ್ತಿಯಿಂದ ನಾವು ದೇವರನ್ನು ಮೆಚ್ಚಿಸಬೇಕು ನಮ್ಮಲ್ಲಿರುವಂತಹ ಶ್ರೀಮಂತಿಕೆಯಿಂದ ಅಲ್ಲ ಅನ್ನೋದು ನಮಗೆ ಸ್ಪಷ್ಟತೆ ಇರಬೇಕು ಆದ್ದರಿಂದ ನಾವು ನಮ್ಮ ಶ್ರದ್ಧಾ ಕೇಂದ್ರಗಳಲ್ಲಿ ಭಕ್ತಿಯಿಂದಲೇ ದೇವರನ್ನು ಮೆಚ್ಚಿಸುವಂಥಾ ಕಾರ್ಯ ಆಗಬೇಕು. 

ಭಜನೆಯ ಮುಖಾಂತರ ನಾವು ದೈವ-ದೇವರುಗಳ ತಿಳುವಳಿಕೆಯನ್ನು ಮಕ್ಕಳಿಗೆ ತಿಳಿಸುವಂತಹ ಕಾರ್ಯ ಆಗಬೇಕಾದರೆ ನಾವು ಭಜನೆಯನ್ನು ಕೊಡವೂರು ಗ್ರಾಮದಲ್ಲಿ ಎಲ್ಲಾ ಮನೆಯಲ್ಲೂ ಭಜನೆ ಮಾಡಿಸುವಂತಹ ಸಂಘಟನೆಯನ್ನು ನಾವು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ವಿಜಯ ಕೊಡವೂರು ನುಡಿದರು.

ಏಕನಾಥ ಮಲ್ಪೆ ಕೊಳರ ಮಗಳ ಹುಟ್ಟುಹಬ್ಬದ ನಿಮಿತ್ತ ಅಕ್ಕಿ ವಿತರಣೆಯನ್ನು ಮಾಡಿ,ಕೊಡವೂರು ವಾರ್ಡ್ ನಲ್ಲಿ ಇಂತಹ ಒಂದು ಒಳ್ಳೆಯ ಕೆಲಸ ನಡೆಯುತ್ತಾ ಇದೆ,ತಾವು ಸಂತೋಷ ಪಡುವ ದಿನದ ಜೊತೆಯಲ್ಲಿ ಇಂತಹ ಕಷ್ಟದಲ್ಲಿ ಇರುವ ದುಡಿಯಲು ಸಾಧ್ಯವಿಲ್ಲದವರ ಕಣ್ಣಿರುವ ಒರೆಸುವ ಕೆಲಸಕ್ಕೆ ನನಗೆ ಅವಕಾಶವನ್ನು ನೀಡಿದ ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ವಿಜಯ್ ಕೊಡವೂರು ಇವರಿಗೆ ಧನ್ಯವಾದ ಸಲ್ಲಿಸುತ್ತೇವೆ, ಮತ್ತು ಪ್ರತೀ 3 ತಿಂಗಳಿಗೊಮ್ಮೆ ತಾನು ಈ ಸೇವೆಯನ್ನು ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.

ವಿನಾಯಕ್ ರಾವ್ ಸೇವಾಭಾರತಿ ಕನ್ಯಾಡಿ ಕಾರ್ಯದರ್ಶಿಯಾಗಿರುವ ಸ್ವರ್ಣಲತಾ,

ಸೇವಾ ಭಾರತೀಯ ಚರಣ್, ದಿವ್ಯಾಂಗ ರಕ್ಷಣಾ ಸಮಿತಿಯ ಅಧ್ಯಕ್ಷರು ಹರೀಶ್ ಕೊಪ್ಪಳ್ ತೋಟ, ವಿಷ್ಣು ಪ್ರಸಾದ್,ರವಿರಾಜ್,ಗಿರೀಶ್ ಇನ್ನಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply