ಉಡುಪಿ: ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಬಳಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೆಸರಾಂತ ಶ್ರೀಕೃಷ್ಣಪ್ರಸಾದ್ ಹೋಟೆಲ್ ನ್ನು ಸ್ಥಳಾಂತರಿಸಗೊಳ್ಳಲಿದೆ. ಜುಲೈ ೧೫ರಂದು ಬ್ರಹ್ಮಗಿರಿ ಬಳಿಯ ಶಂಕರ ಪ್ಲಾಜಾ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಹೋಟೆಲ್ ಮಾಲೀಕ ಕುತ್ಯಾರು ನಾಗೇಶ ಭಟ್ ತಿಳಿಸಿದ್ದಾರೆ.
ಕಳೆದ ಸುಮಾರು 4 ದಶಕಗಳಿಂದ ಉಡುಪಿ ಜನತೆಯ ಮನೆಮಾತಾಗಿರುವ ಹೋಟೆಲ್ ಶ್ರೀಕೃಷ್ಣ ಪ್ರಸಾದ್ ಶುಚಿ ರುಚಿಯ ಊಟ, ಉಪಾಹಾರಕ್ಕೆ ಹೆಸರುವಾಸಿಯಾಗಿದೆ.
ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೇಂಜ ಶ್ರೀಧರ ತಂತ್ರಿ ಧಾರ್ಮಿಕ ವಿಧಿ ವಿಧಾನ ನಡೆಸಲಿದ್ದು, ಬೆಳಿಗ್ಗೆ 9 ಗಂಟೆ ಬಳಿಕ ಸಾರ್ವಜನಿಕ ಸೇವೆಗೆ ಹೋಟೆಲ್ ತೆರೆದುಕೊಳ್ಳಲಿದೆ ಎಂದು ಭಟ್ ತಿಳಿಸಿದ್ದಾರೆ.