ಕೋಟ:ಯುವಕನ ಬೆನ್ನಿಗೆ ಚಾಕು ಇರಿತ 

ಕೋಟ: ಸ್ನೇಹಿತನೊಂದಿಗೆ ಮೆಡಿಕಲ್‌ಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ. ಪಾರಂಪಳ್ಳಿ ಅಂಬಾಗಿಲು ಸುಚಿತ್ ಸಿ. (17), ಆ.30 ರಂದು ರಾತ್ರಿ ಸ್ನೇಹಿತ ರಂಜಿತ್‌ನೊಂದಿಗೆ ಕೋಟ ಪೇಟೆಗೆ ಪ್ರೋಟೀನ್ ಆಹಾರ ತರಲು ಹೋಗಿದ್ದರು.

ಪಾರಂಪಳ್ಳಿಯಿಂದ ಕೋಟತಟ್ಟು ಗ್ರಾಮದ ಕೋಟ ಥೀಮ್ ಪಾರ್ಕ್‌ನಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ರಸ್ತೆಯಲ್ಲಿ ಕಿಶನ್, ಶಿವಪ್ರಸಾದ್, ಗೌತಮ್, ಚೇತನ್, ವಿಕಾಸ್ ಮೋಟಾರು ಸೈಕಲ್ಲನ್ನು ತಡೆದು ಸುಚಿತ್ ಮತ್ತು ರಂಜಿತ್ ರವರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಸುಚಿತ್ ಓಡಿದಾಗ ಬಟ್ಟೆಯನ್ನು ಹಿಡಿದು ಎಳೆದಿದ್ದರು.

ಅಷ್ಟಲ್ಲದೆ ಓಡಲು ಪ್ರಯತ್ನಿಸಿದಾಗ ಯುವಕನಿಗೆ . ಯುವಕ ಬೊಬ್ಬೆ ಹಾಕುತ್ತಿದ್ದಂತೆ ತಂಡವು ಮತ್ತೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದೆಂದು ಯುವಕ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 
 
 
 
 
 
 
 
 
 
 

Leave a Reply