ಉಡುಪಿ: ಜಿಲ್ಲೆಯ ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಮಾಜ ಸೇವಕ ಲೀಲಾಧರ ಶೆಟ್ಟಿ ಜಿಲ್ಲೆಯ ಹತ್ತು ನಾಟಕ ತಂಡದ ಸುಮಾರು 48 ಕಲಾವಿದರಿಗೆ ಕಿಟ್ ವಿತರಿಸಿದರು.
ದಾನಿಗಳ ಸಹಕಾರ ಪಡೆಯದೆ ಸ್ವತ: ಕಿಟ್ ನ ಖರ್ಚು ವೆಚ್ಚಗಳನ್ನು ಭರಿಸಿ ಜಿಲ್ಲೆಯ ರಂಗಭೂಮಿ ತಂಡಗಳ ಕಲಾವಿದರಿಗೆ ಸಹಾಯ ಹಸ್ತ ಚಾಚಿದ್ದಾರೆ. ವಿವಿಧ ತಂಡಗಳ ಕಲಾವಿದರಿಗೆ ಉಡುಪಿಯಲ್ಲಿ ಕಿಟ್ ವಿತರಿಸಲಾಯಿತು. ಕೊರೊನಾ ಸಂಕಷ್ಟ ಕಾಲದಲ್ಲಿ ಬದುಕಿನ ಎಲ್ಲಾ ಅವಕಾಶವನ್ನು ಕಳಕೊಂಡವರು ಕಲಾವಿದರು. ಸತತ ಎರಡು ವರ್ಷ ಆದಾಯವಿಲ್ಲದೆ ಕಳೆದ ಕಲಾವಿದರಿಗೆ ಒಕ್ಕೂಟದ ಅಧ್ಯಕ್ಷರು ಬೆಂಬಲವಾಗಿ ನಿಂತಿದ್ದಾರೆ. ಉತ್ತಮ ಮೌಲ್ಯದ ಕಿಟ್ ನೀಡುವುದರ ಮೂಲಕ ಒಂದಷ್ಟು ಆಶಾದಾಯಕ ಬದುಕಿಗೆ ಸಹಕರಿಸಿದ್ದಾರೆ.
ಪಲ್ಲವಿ ಕಲಾವಿದರು ಕಾರ್ಕಳ, ಸಿಂದೂರ ಕಲಾವಿದರು ಕಾರ್ಕಳ, ಚೈತನ್ಯ ಕಲಾವಿದರು, ಬೈಲೂರು, ಕರಾವಳಿ ಕಲಾವಿದರು ಉಡುಪಿ, ಕೃಷ್ಣ ಕಲಾವಿದರು ಉಡುಪಿ, ಸಂಸಾರ ಕಲಾವಿದರು ಪಣಿಯೂರ್, ಸಾಕ್ಷಿ ಕಲಾವಿದರು ಬೆಳಪು, ತೆಲಿಕೆದ ತೆನಾಲಿ ಕಾರ್ಕಳ, ಅಭಿನಯ ಕಲಾವಿದರು ಉಡುಪಿ, ತುಳುವ ಸಿರಿ ಕಲಾವಿದೆರ್ ಬೆಳ್ಮಣ್ ಈ ತಂಡಗಳ ಕಲಾವಿದರು ಕಿಟ್ ಸ್ವೀಕರಿಸಿದರು.ಲೀಲಾಧರ ಶೆಟ್ಟಿಯವರ ಕಲಾ ಸೇವೆಗೆ ಕಲಾವಿದರು ಕೃತಜ್ಞತೆ ಸಲ್ಲಿಸಿದ್ದಾರೆ.