ಯುವ ಮುಖಂಡ ಕಿರಣ್ ಕುಮಾರ್ ಉದ್ಯಾವರ ಬಿಜೆಪಿ ಸೇರ್ಪಡೆ.

ಉಡುಪಿ: ರಾಷ್ಟ್ರೀಯ ಮೀನುಗಾರ ಕಾಂಗ್ರೆಸ್ಸ್ ನವದೆಹಲಿಯ ಕಾರ್ಯದರ್ಶಿ, APMC ಸದಸ್ಯ, ಮಾಜಿ ತಾಲೂಕು ಹಾಗೂ ಗ್ರಾಮ ಪಂಚಾಯ್ತ್ ಸದಸ್ಯ. ಉದ್ಯಾವರಹಿತ್ಳು ಮೊಗವೀರ ಗ್ರಾಮ ಸಭಾದ ಉಪಾಧ್ಯಕ್ಷ, ಹಾಗು ಹದಿನಾಲ್ಕು ಪಟ್ನ ಮೊಗವೀರ ಗ್ರಾಮ ಸಭಾದ ಕಮಿಟಿ ಸದಸ್ಯ ಉದ್ಯಾವರ ಕಿರಣ್ ಕುಮಾರ್ ಇವರು ಕಾಪು ಶಾಸಕ ಶ್ರೀ ಲಾಲಾಜಿ ಮೆಂಡನ್ ರವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು. 
ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮ ಪರಿವಾರ ಪ್ರಮುಖರಾದ, ಕಾಪು ಕ್ಷೇತ್ರದ ಮಾಜಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಸುವರ್ಣ ಬೋಳ್ಜೆ, ಉದ್ಯಾವರ ಬಿಜೆಪಿ ಸ್ಥಾನೀಯ ಮಾಜಿ ಅಧ್ಯಕ್ಷರು, ಹಾಗೂ ಮಾಜಿ ಗ್ರಾಮ ಪಂಚಾಯ್ತ್ ಮಾಜಿ ಅಧ್ಯಕ್ಷ  ವಿಲ್ಸೊನ್ ರಾಜಕುಮಾರ್, Apmc ಹಾಗೂ ಉದ್ಯಾವರ ಗ್ರಾಮ ಪಂಚಾಯ್ತ್ ಮಾಜಿ ಅಧ್ಯಕ್ಷ ವಿಜಯಕುಮಾರ್ ಉದ್ಯಾವರ, ಉದ್ಯಾವರ ಗ್ರಾಮ ಪಂಚಾಯ್ತ್  ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೋಳ್ಜೆ, ಉಡುಪಿ ತಾಲೂಕು ಪಂಚಾಯ್ತ್ ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಹಾಗೂ ಉದ್ಯಾವರ ಸ್ಥಾನೀಯ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಹಾಗೂ ಮಾಜಿ ಸದಸ್ಯ ಸೋಮನಾಥ್ ದೇವಾಡಿಗ ಹಾಗೂ  ಪರಮೇಶ್ವರ್ ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply