ಡಿ.10 ಕಟಪಾಡಿಯಲ್ಲಿ ಕಾಪು ತಾಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲ್ಲೂಕು ಘಟಕದ ೪ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕಟಪಾಡಿ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನಲ್ಲಿ ಡಿ. ೧೦ ಶನಿವಾರ ರಂದು ಹಿರಿಯ ಬಹುಭಾಷಾ ಸಾಹಿತಿ, ರಂಗಕರ್ಮಿ ಕ್ಯಾಥರಿನ್ ರೊಡ್ರಿಗಸ್ ಕಟಪಾಡಿ ಅವರ ಸರ್ವಾಧ್ಯಕ್ಷತೆಯಲ್ಲಿ ಜರಗಲಿದೆ.

‘ಸ್ವರಾಜ್ಯ ಸಂಗ್ರಾಮದಲ್ಲಿ ಕಟಪಾಡಿ ಕೇಂದ್ರಿತ ಸಮರಸ್ಫೂರ್ತಿ’ ಎಂಬ ಪರಿಕಲ್ಪನೆಯಲ್ಲಿ, ಧೀರ ಸ್ವಾತಂತ್ರ್ಯ ಸೇನಾನಿಗಳಾದ ಕಟಪಾಡಿ ಪಾಂಗಾಳ ಲಕ್ಷ್ಮೀನಾರಾಯಣ ನಾಯಕ್ ಸಭಾಂಗಣ, ಕಟಪಾಡಿ ಪಾಂಗಾಳ ಮಂಜುನಾಥ ನಾಯಕ್ ವೇದಿಕೆಯಲ್ಲಿ ದೇಶದ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹಾಗೂ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಪ್ರಯುಕ್ತ ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಸಮ್ಮೇಳನದ ಆವರಣಕ್ಕೆ ಸ್ವಾತಂತ್ರö್ಯ ಹೋರಾಟಗಾರ ಕಟಪಾಡಿ ಗೋಪಾಲ ಕೋಟ್ಯಾನ್ ಅವರ ಹೆಸರನ್ನಿಡಲಾಗಿದೆ. ಎಸ್.ವಿ.ಎಸ್ ವಿದ್ಯಾಸಂಸ್ಥೆಗೆ 75ರ ಹರೆಯದ ಸವಿನೆನಪಿಗಾಗಿ ಮಹಾದ್ವಾರಕ್ಕೆ
ಸಂಸ್ಥಾಪಕರಾದ ಪಾಂಗಾಳ ಶ್ರೀನಿವಾಸ ನಾಯಕ್ ಮತ್ತು ವೈಕುಂತ ನಾಯಕ್ ರವರ ಹೆಸರಿಡಲಾಗಿದೆ.

ಭವ್ಯ ಶೋಭಾಯಾತ್ರೆಗೆ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಕೆ.ಸತ್ಯೇಂದ್ರ ಪೈ ಚಾಲನೆ ನೀಡಲಿದ್ದಾರೆ. ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಮುಖ್ಯ ಅಭ್ಯಾಗತರಾಗಿ ಸ್ವಾತಂತ್ರö್ಯ ಹೋರಾಟಗಾರ, ಗೋವಾ ವಿಮೋಚನಾ ಹೋರಾಟಗಾರ ಕಾಪು ತಾ. ಶಿರ್ವಾ ಮೂಲದ ಮಟ್ಟಾರು ವಿಟ್ಠಲ ಕಿಣಿ, ಮೂರನೇ ಸಮ್ಮೇಳನದ ಸರ್ವಾಧ್ಯಕ್ಷರಾದ ಭರತ್‌ಕುಮಾರ್ ಪೊಲಿಪು ಸಹಿತ ಗಣ್ಯರು ಉಪಸ್ಥಿತರಿರಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದು, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಮೊದಲಾದವರು ಉಪಸ್ಥಿತರಿರಲಿದ್ದಾರೆ.

ಪ್ರಮುಖ ಗೋಷ್ಠಿ “ಸ್ವರಾಜ್ಯ ಸಂಗ್ರಾಮದಲ್ಲಿ ಕಟಪಾಡಿ ಕೇಂದ್ರಿತ ಸಮರ ಸ್ಫೂರ್ತಿ” ಈ ಕುರಿತು ಉಪನ್ಯಾಸಕ ದಿನೇಶ್ ಕುಮಾರ್ ಕಟಪಾಡಿ, ಮತ್ತು “ಉಡುಪಿಯ ಐತಿಹಾಸಿಕ, ಸಾಹಿತ್ಯಿಕ ಸಾಂಸ್ಕೃತಿಕ ಹಿನ್ನೆಲೆ”ಈ ಬಗ್ಗೆ ಖ್ಯಾತ ಚಿಂತಕ ಡಾ.ರಾಘವೇಂದ್ರ ರಾವ್ ಕಟಪಾಡಿ ವಿಷಯ ಮಂಡನೆ ಮಾಡಲಿದ್ದಾರೆ.
ಪ್ರಶಸ್ತಿ ಪುರಸ್ಕೃತ ಉದಯೋನ್ಮುಖ ಕವಯತ್ರಿ ಶ್ರೀಮತಿ ಫಾತಿಮಾ ರಲಿಯಾ ಹೆಜಮಾಡಿ ಇವರ ಉಪಸ್ಥಿತಿಯಲ್ಲಿ ಜರುಗುವ “ವಿದ್ಯಾರ್ಥಿ ಕವಿಗೋಷ್ಠಿ”ಯಲ್ಲಿ ತಾಲೂಕಿನ ವಿವಿಧ ಕಾಲೇಜುಗಳ ೧೨ ಕವಿಗಳು ಕವನ ವಾಚನ ಮಾಡಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕಾಪು ಸರಕಾರಿ ಪ್ರ.ದ. ಕಾಲೇಜಿನ ಪ್ರಾಚಾರ್ಯ ಪ್ರೊ| ಸ್ಟೀವನ್ ಕ್ವಾಡ್ರಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಅದಾನಿ ಸಂಸ್ಥೆಯ ಅಧ್ಯಕ್ಷ ಡಾ| ಕಿಶೋರ್ ಆಳ್ವಾ ಸಾಧಕರನ್ನು ಸಮ್ಮಾನಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಂಕರ್ ದಾಸ್ ಚಂಡ್ಕಳ ಮತ್ತು ತಂಡದಿAದ ಕರಗ ನೃತ್ಯ, ಗಣೇಶ ಗಂಗೊಳ್ಳಿ ಮತ್ತು ತಂಡದಿAದ ಸುಗಮ ಸಂಗೀತ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ದಯಾನಂದ ಪೈ, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸನ್ಮಾನಗೊಳ್ಳಲಿರುವ ವಿವಿಧ ಕ್ಷೇತ್ರಗಳ ಸಾಧಕರು:-ಸುಧಾಕರ ಪಾಣಾರ ಮೂಡುಬೆಳ್ಳೆ(ದೈವಾರಾಧನೆ), ಕು.ಸುಮಂಗಳಾ ಕುಲಾಲ್ ಪಂಜಿಮಾರು(ವಿಶೇಷ ಚೇತನ ಪ್ರತಿಭೆ), ಸಂದೀಪ್ ರಾವ್ ಮಟ್ಟು(ಕೃಷಿ), ಡಾ.ಉದಯಕುಮಾರ್ ಶೆಟ್ಟಿ (ವೈದ್ಯಕೀಯ), ಶ್ರೀಮತಿ ರೂಪಾ ಆಚಾರ್ಯ ಪಡುಬಿದ್ರಿ( ಕುಸುರಿ ಕಲೆ), ಪ್ರಕಾಶ್ ಸುವರ್ಣ ಕಟಪಾಡಿ(ಮಾಧ್ಯಮ), ವೆಂಕಟರಮಣ ಭಟ್(ಅಪ್ಪು ಭಟ್) ಇನ್ನಂಜೆ(ಧಾರ್ಮಿಕ), ರಾಜೀವ ತೋನ್ಸೆ(ಯಕ್ಷಗಾನ), ಸುಭಾಸ್ ನಾಯಕ್ ಬಂಟಕಲ್ಲು(ಪುರಾತತ್ವ ಸಂಶೋಧನೆ), ಅನ್ವರ್ ಕಟಪಾಡಿ (ಕ್ರೀಡೆ), ಸಂಘ ಸಂಸ್ಥೆಗಳ ಪರವಾಗಿ ರವಿ ಫ್ರೆಂಡ್ಸ್ ಕಟಪಾಡಿ, ಗಿರಿಬಳಗ ಕುಂಜಾರುಗಿರಿ, ಮಹಿಳಾ ಮಂಡಲ(ರಿ) ಕಟಪಾಡಿ.

 
 
 
 
 
 
 
 
 

Leave a Reply