ಉಳಿತಾಯ ಹಾಗೂ ಚಾಲ್ತಿ ಖಾತೆ ಮನೆ ಮನೆಗೂ ತಲುಪುವ ನಿಟ್ಟಿನಲ್ಲಿ ವಿಶಿಷ್ಟ ಅಭಿಯಾನಕ್ಕೆ ಚಾಲನೆ

ಉಡುಪಿ: ಉಳಿತಾಯ ಹಾಗೂ ಚಾಲ್ತಿ ಖಾತೆ ಮನೆ ಮನೆಗೂ ತಲುಪುವ ನಿಟ್ಟಿನಲ್ಲಿ ವಿಶಿಷ್ಟ ಅಭಿಯಾನಕ್ಕೆ ಉಡುಪಿಯಲ್ಲಿ ಚಾಲನೆ ಸಿಕ್ಕಿದೆ. ಕರ್ನಾಟಕ ಬ್ಯಾಂಕಿನ ಖಾತೆ ಹಾಗೂ ವಿಮೆ ಸೌಲಭ್ಯವನ್ನ 32 ಸ್ಥಳಗಳಲ್ಲಿ ಅಭಿಯಾನದ ಮೂಲಕ ಮನೆ ಮನೆಗೂ ತಲುಪಿಸಲು ಕರ್ನಾಟಕ ಬ್ಯಾಂಕ್ , ಪೀಸ್ ಫೌಂಡೇಶನ್, ದಿವ್ಯಾಂಗರ ರಕ್ಷಣಾ ವೇದಿಕೆ, ಯಶೋಧ ಆಟೋ ಯೂನಿಯನ್, ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಹಾಗೂ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಜಂಟಿ ಸಹಯೋಗದಲ್ಲಿ ಅಭಿಯಾನಕ್ಕೆ ನಗರದ ಮಥುರಾ ಕಂಪರ್ಟ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ಪೀಸ್ ಫೌಂಡೇಶನ್ ಸ್ಥಾಪಕಿ ಡಾ.ಸೋನಿಯಾ‌‌ ಅವರನ್ನ ಕರ್ನಾಟಕ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.

 
 
 
 
 
 
 
 
 

Leave a Reply