ಶಾಸಕ ಡಾ.ಭರತ್ ಶೆಟ್ಟಿಯಿಂದ ಕಾರ್ಮಿಕ ಕಾರ್ಡ್, ಸೊಳ್ಳೆ ಪರದೆ ವಿತರಣೆ

ಮಂಗಳೂರು : ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 3ನೇ ವಾರ್ಡ್ ಕಾಟಿಪಳ್ಳ ಪೂರ್ವದಲ್ಲಿ ಶಾಸಕ ಡಾ. ಭರತ್ ಶೆಟ್ಟಿಯ ಉಪಸ್ಥಿತಿಯಲ್ಲಿ ಸೋಮವಾರ ಕಾರ್ಮಿಕ ಕಾರ್ಡ್ ಮತ್ತು ಸೊಳ್ಳೆ ಪರದೆ ವಿತರಣೆ ಕಾರ್ಯಕ್ರಮ ನಡೆಯಿತು. 

ಮ. ನ. ಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಶ್ರೀ ನಿತ್ಯಾನಂದ ಭಜನಾ ಮಂದಿರದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಗಾರ್, ಶ್ರೀ ಜಾರಂದಾಯ ದೈವಸ್ಥಾನ ಮೊಕ್ತೇಸರ ಕೇಶವ ಸನಿಲ್, MPW ವರ್ಕರ್ ಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ಯಶವಂತಿ ಹಾಗೂ ಸೊಳ್ಳೆ ಪರದೆ ಮತ್ತು ಕಾರ್ಮಿಕರ ಕಾರ್ಡ್ ನ ಪಲಾನುಭವಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply