ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ರಸ್ತೆಯ ಕಲ್ಮಾಡಿ ಜಂಕ್ಷನ್ ಬಳಿ ಸರಣಿ ಅಪಘಾತ ನಡೆದಿದೆ. ಕಾರು ಉಡುಪಿ ಕಡೆಯಿಂದ ಮಲ್ಪೆಗೆ ಬರುತ್ತಿರುವ ಕಾರು ಚಾಲಕ ನಿಯಂತ್ರಣ ತಪ್ಪಿ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ. ಮೂರು ಬೈಕ್ ಸವಾರರು ಗಂಭಿರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೈಕ್ ಸವಾರ ಕಾನಂಗಿಯ ಪ್ರಶಾಂತ ,ದಯಾನಂದ ಹಾಗೂ ಸುರೇಶ್. .ಗಂಭೀರ ಗಾಯಗೊಂಡವರನ್ನು ನಗರ ಸಭೆ ಸದಸ್ಯ ಸುಂದರ್ ಕಲ್ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಚಾಲಕ ಸುಕೇಶ್ ಕುಂದಾಪುರ ನಿವಾಸಿ ಎನ್ನಲಾಗಿದೆ. ಕಾರು ಡಿಕ್ಕಿಯಾದಾಗ ಪಕ್ಕದಲ್ಲಿ ಇದ್ದ ಮೀನು ಮಾರುತಿದ್ದವರ ಬುಟ್ಟಿಗೂ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಮಲ್ಪೆ ಪೊಲೀಸರು ಸ್ಥಳಕ್ಕೆ ಕೂಡಲೇ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.ಸರಣಿ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.