ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ,ಉಡುಪಿ ಜಿಲ್ಲೆ (ರಿ),ಮಹಾ ಸಭೆ

ಉಡುಪಿ : ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ,ಉಡುಪಿ ಜಿಲ್ಲೆ (ರಿ),ಮಹಾ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ನಾ.21 ರಂದು ಉಡುಪಿ ಶೋಕ ಮಾತೆ ಚರ್ಚಿನ ಸಭಾಂಗಣದಲ್ಲಿ ನಡೆಯಿತು. 

ಅಧ್ಯಕ್ಷೆ ಸೆವ್ರಿನ್ ಡೇಸಾ ಸ್ವಾಗತಿಸಿದರು. ಕಾರ್ಯದರ್ಶಿ ಜನಾಬ್ ಎಮ್.ಎಸ್. ಖಾನ್ ವಾರ್ಷಿಕ ವರದಿಯನ್ನು ಮಂಡಿಸಿದ ನಂತರ ಮಾಜಿ ಅಧ್ಯಕ್ಷ ಡಾ। ಜೆರಾಲ್ಡ್ ಪಿಂಟೋ 2021-22 ಸಾಲಿನ ಪದಾಧಿಕಾರಿಗಳ ಚುನಾವಣೆಯನ್ನು ನಡೆಸಿದರು. ಈ ಕೆಳಗಿನ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾದರು.

ಅಧ್ಯಕ್ಷರು: ಎಮ್.ಎಸ್. ಖಾನ್-ಹೂಡೆ, ಉಪಾಧ್ಯಕ್ಷರು: ರೋಬರ್ಟ್ ಮಿನೇಜಸ್-ಕಣಜಾರು, ಕಾರ್ಯಧರ್ಶಿ: ಸಿರಿಲ್ ಮೊಂತೆರೊ-ಕೊಳಲಗಿರಿ, ಕೋಶಾಧಿಕಾರಿ: ಲೂವಿಸ್ ಅಲ್ಮೇಡಾ-ಮಣಿಪಾಲ, ಸಹ ಕಾರ್ಯಧರ್ಶಿ: ಕೆ.ಪಿ ಇಬ್ರಾಹಿಂ, ಸಹ ಕೋಶಾಧಿಕಾರಿ: ಸೆವ್ರಿನ್ ಡೇಸಾ, ಸಲಹಾದಾರರು; ರೆ. ಪಾ. ಚಾರ್ಲ್ಸ್ ಮಿನೇಜಸ್, ಬೈಕಾಡಿ ಹುಸೇನ್ ಹಾಗೂ ಪಾರೂಕ್ ಕಾರ್ಕಳ ಆಯ್ಕೆಯಾಗಿರುತ್ತಾರೆ. ಪ್ರಸ್ತುತ ಕಾರ್ಯದರ್ಶಿ ಸಿರಿಲ್ ಮೊಂತೆರೂ ವಂದಿಸಿದರು.

 
 
 
 
 
 
 
 
 
 
 

Leave a Reply