ಹಡಿಲು ಭೂಮಿ ಕೃಷಿ ಆಂದೋಲನ- ವಡಭಾಂಡೇಶ್ವರ ವಾರ್ಡಿನಲ್ಲಿ ಶಾಸಕ ರಘುಪತಿ ಭಟ್ ಸಭೆ

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಶಾಸಕ ಶ್ರೀ ಕೆ. ರಘುಪತಿ ಭಟ್ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಇಂದು ದಿನಾಂಕ ನಗರಸಭಾ ವ್ಯಾಪ್ತಿಯ ವಡಭಾಂಡೇಶ್ವರ ವಾರ್ಡಿನಲ್ಲಿ ಸಭೆ ನಡೆಸಲಾಯಿತು.

ಶಾಸಕರು ಮಾತನಾಡಿ ವಡಭಾಂಡೇಶ್ವರ ವಾರ್ಡಿನ ಯುವಕರು, ಸಂಘ-ಸಂಸ್ಥೆಯವರು, ಕೃಷಿಕರು ವಾರ್ಡಿನಲ್ಲಿ ಇರುವ ಹಡಿಲು ಭೂಮಿಗಳನ್ನು ಸಂಪೂರ್ಣ ಸಾವಯವ ಕೃಷಿ ಮಾಡುವುದಾಗಿ ಸಂಕಲ್ಪ ಮಾಡಬೇಕು. ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

 ನಗರಸಭಾ ಸದಸ್ಯರಾದ ಯೋಗೀಶ್ ಸಾಲ್ಯಾನ್, ಮಂಜುನಾಥ್ ಮಣಿಪಾಲ್, ಸುಂದರ್ ಕಲ್ಮಾಡಿ, ಪಟ್ಲನೆರ್ಗಿ ನಾಗರಿಕ ಸಮಿತಿಯ ಅಧ್ಯಕ್ಷ, ಸರ್ವ ಸದಸ್ಯರು, ವಡಭಾಂಡೇಶ್ವರ ಬೊಬ್ಬರ್ಯ ಸೇವಾ ಸಮಿತಿ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply