ಉಡುಪಿಯಲ್ಲಿ ವಿಶಿಷ್ಟವಾಗಿ ನಡೆದ ಹೆಣ್ಣು ಮಕ್ಕಳ ದಿನಾಚರಣೆ

ಉಡುಪಿ: ಬೇಟಿ ಬಚಾವೋ ಬೇಟಿ ಪಡಾವೋ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಶಕ್ತಿ ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯಾ ಹೆಣ್ಣು ಮಕ್ಕಳ ದಿನಾಚರಣೆ ನಿಟ್ಟೂರಿನ ಬಾಲಕಿಯರ ಬಾಲಮಂದಿರ ಜರುಗಿತು .

ವಿಶೇಷವೆಂದರೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಪುಟಾಣಿ ಮಕ್ಕಳೊಂದಿಗೆ ಗಿಡಕ್ಕೆ ನೀರು ಸುರಿದು ಉದ್ಘಾಟಿಸಿ ಶುಭ ಹಾರೈಸಿದರು .ಮಕ್ಕಳ ಬಾಯಿಗೆ ಜೇನು ತುಪ್ಪ ಹಾಕುವ ಮೂಲಕ ಮಕ್ಕಳ ಭವಿಷ್ಯ ಸಿಹಿ ಯಾಗಿರಲಿ ಎಂದು ಹಾರೈಸಲಾಯಿತು. ಈ ರೀತಿಯಲ್ಲಿ ವಿಶಿಷ್ಟವಾಗಿ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಆರ್ .ಶೇಷಪ್ಪ ಮಾತನಾಡಿ ಮಕ್ಕಳ ರಕ್ಷಣೆ ಪೋಷಣೆ ಹಾಗೂ ಸರ್ಕಾರದ ಯೋಜನೆ ಅನುಷ್ಠಾನ ಗೊಳಿಸುವ ಮೂಲಕ ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದರು . ಮುಖ್ಯ ಅಥಿತಿ ಸದಾನಂದ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಾತನಾಡಿ ಮಕ್ಕಳ ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಬಾಲ್ಯವಿವಾಹ, ಇತ್ಯಾದಿ ಕಾಯ್ದೆ ಕುರಿತಾದ ಅರಿವು ಮೂಡಿಸಿದರು .

ಚಂದ್ರಿಕಾ ಎಸ್ ನಾಯಕ್, ಅಭಿವೃದ್ಧಿ ನಿರೀಕ್ಷಕರು ಮಹಿಳಾ ಅಭಿವೃದ್ಧಿ ನಿಗಮ ಪ್ರಾಸ್ತಾವಿಕ ಮಾತನಾಡಿದರು. ಸುಮತಿ, ಅಧೀಕ್ಷಕಿ ಬಾಲಕಿಯರ ಬಾಲಮಂದಿರ ನಿಟ್ಟೂರು ರಾಮಚಂದ್ರ ಉಪಾಧ್ಯ, ನಿರ್ದೇಶಕರು ಮಕ್ಕಳ ಸಹಾಯವಾಣಿ, ದೀಪಾ ಮಹಿಳಾ ಕಲ್ಯಾಣಾಧಿಕಾರಿ ಮಹಿಳಾ ಶಕ್ತಿ ಕೇಂದ್ರ , ಪ್ರಭಾಕರ ಆಚಾರ್, ಕಾನೂನು ಪರಿವೀಕ್ಷಣಾಧಿಕಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಪಸ್ಥಿತರಿದ್ದರು .ಮಹಿಳಾ ಶಕ್ತಿ ಕೇಂದ್ರದ ಸಂಯೋಜಕರಾದ ಶಾರದಾ ಸ್ವಾಗತಿಸಿ ಅನುಷಾ ವಂದಿಸಿದರು .

 
 
 
 
 
 
 
 
 
 
 

Leave a Reply