ಧಾರ್ಮಿಕ ಉತ್ಸವಗಳ ನೆಪದಲ್ಲಿ ಮನೋರಂಜನೆಗೆ ಅವಕಾಶವಿಲ್ಲ- ಡಿಸಿ ಜಿ ಜಗದೀಶ್ ಖಡಕ್ ಎಚ್ಚರಿಕೆ

ಉಡುಪಿ: ಮಹಾಮಾರಿ ಕೊರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆ ಜಾತ್ರೆ ಉತ್ಸವ ಧಾರ್ಮಿಕ ಆಚರಣೆಗೆ ಮಾತ್ರ ಸೀಮಿತವಾಗಿರಬೇಕು ಮತ್ತು ಧಾರ್ಮಿಕ ಉತ್ಸವದ ನೆಪದಲ್ಲಿ ಮನೋರಂಜನೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

 ಮಂಗಳವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಉತ್ಸವಕ್ಕೆ ಅವಕಾಶ ನೀಡಲಾಗುವುದಿಲ್ಲ. ಕೋವಿಡ್ ಕಾಲದಲ್ಲಿ ಎಕ್ಸಿಬಿಷನ್, ಮನೋರಂಜನೆ ಗೆ ಯಾವುದೇ ಅವಕಾಶವಿಲ್ಲ. ಹಾಗಾಗಿ ತಮ್ಮ ಬಳಿ ಬಂದ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದೇವೆ ಈಗಾಗಲೇ ಸಿದ್ಧತೆ ಮಾಡಿದ್ದರೆ ವಾಪಾಸ್ ಹೋಗಬೇಕು. ಕೋವಿಡ್ ಹೆಚ್ಚಿರುವ ಕಾರಣ ಮೋಜಿನ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

 
 
 
 
 
 
 
 
 
 
 

Leave a Reply