ಈ ಬಾರಿಯ ಸ್ವಾತಂತ್ರೋತ್ಸವ ದಿನದ ಅಂಗವಾಗಿ ಕಲಾವಿದ ಶ್ರೀನಾಥ್ ಮಣಿಪಾಲ್ , ಸಮುದಾಯ ವೈದ್ಯಕೀಯ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ಕೆ ಎಂ ಸಿ ಯ (ಇಂಟ್ರಾರಕ್ಟ್) ಆವರಣದಲ್ಲಿ ಬೃಹತ್ ಜಲವರ್ಣ ಕಲಾ ಕೃತಿ ಯನ್ನು ರಚಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಸಮರ್ಪಿಸಿದ್ದಾರೆ. ಕೆ ಎಂ ಸಿ ಯ ಡೀನ್ ಡಾ.ಶರತ್ ರಾವ್ ಕಲಾಕೃತಿಯನ್ನು ಅನಾವರಣಗೊಳಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಡಾ.ಸುಮ ನಾಯರ್, ಡಾ. ವೀಣಾ ಕಾಮತ್, ಡಾ.ಈಶ್ವರಿ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.