ಭಾರತೀಯ ಜನತಾ ಪಾರ್ಟಿ ಒಳಕಾಡು ಉಡುಪಿ ವತಿಯಿಂದ ಗಾಂಧಿಜಯಂತಿ ಆಚರಣೆ

ಭಾರತೀಯ ಜನತಾ ಪಾರ್ಟಿ ಒಳಕಾಡು ಉಡುಪಿ ವತಿಯಿಂದ ಗಾಂಧಿಜಯಂತಿ ಆಚರಣೆ ಹಾಗೂ ನರೇಂದ್ರ ಮೋದಿ ಜನ್ಮ ದಿನದ ಸೇವಾ ಸಪ್ತಾಹ,  ಉಡುಪಿ  ಸರಸ್ಪತಿ ಸಭಾಂಗಣದಲ್ಲಿ  ಒಳಕಾಡು ವಾರ್ಡಿನ  3ನೇ ವರ್ಷದ ಸ್ವಚ್ಚತಾ ಕಾರ್ಯ ಕ್ರಮವನ್ನು ಉಡುಪಿ ನಗರ ಪ್ರಾಧಿಕಾರ ಅಧ್ಯಕ್ಷ  ರಾಘವೇಂದ್ರ ಕಿಣಿ ದೀಪ ಬೆಳಗಿಸಿ ಚಾಲನೆ ನೀಡಿದರು. ಉಡುಪಿ ನಗರಸಭಾ ವಾರ್ಡ್ ಗಲ್ಲಿ ಸ್ವಚ್ಛತೆ ಯಲ್ಲಿ  ಪ್ರಥಮ ಸ್ಥಾನ ಗಳಿಸಿದೆ. ಇಲ್ಲಿ ಒಂದು ದಿನಕ್ಕೆ ಸೀಮಿತವಾಗದೆ  ನಿರಂತರ ಸ್ವಚ್ಛತಾ  ಕಾರ್ಯದೊಂದಿಗೆ ಸಮಾಜ ಮುಖಿ ಕೆಲಸಗಳು ನಡೆಯುತ್ತಿದೆ   ಎಂದು ಹೇಳಿದರು . ಕೋರನಾ ವಾರಿಯರ್ ಸೇವೆಯಲ್ಲಿ  159   ಮೃತ ದೇಹದ  ಶವ ಸಂಸ್ಕಾರ ಮಾಡಿದ ಗಾರ್ಜುನ್ ಅವರನ್ನು ಗೌರವಿಸಲಾಯಿತು,  ಪಿ ಯು ಸಿ  ಪ್ರಥಮ  ಸ್ಥಾನ ಗಳಿಸಿದ ಅಭಿಜ್ಞಾ ರಾವ್ ಗೆ ಅಭಿನಂದಿಸಲಾಯಿತು.

ನೆರೆ  ಪರಿಹಾರದಲ್ಲಿ  ಸಹಕರಿಸಿದ  ವಿಘ್ನೇಶ್ ಶೆಣೈ ಗೌರವಿಸಲಾಯಿತು. ಆರ್ಥಿಕ ವಾಗಿ ಹಿಂದುಳಿದ ಓರ್ವರಿಗೆ ಕೃತಕ ಕಾಲನ್ನು ವಿತರಿಸಲಾಯತು. ಸಮಾರಂಭದಲ್ಲಿ ಬಿ.ಜೆ.ಪಿ. ನಗರ ಕಾರ್ಯದರ್ಶಿ ದಿನೇಶ್ ಅಮೀನ್, ಪ್ರದೀಪ್ ಶೆಟ್ಟಿ, ನಗರ ಮಹಿಳಾ ಅಧ್ಯಕ್ಷೆ ಶ್ರೀಮತಿ ಸರೋಜಾ , ಒಳಕಾಡು ವಾರ್ಡಿನ ನಗರ ಸಭಾ ಸದಸ್ಯೆ ರಜನಿ ಹೆಬ್ಬಾರ್, ಮಂಜುನಾಥ್ ಹೆಬ್ಬಾರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಾರ್ಡಿನ  ಆಯ್ದ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು  

 
 
 
 
 
 
 
 
 
 
 

Leave a Reply