ಕುಂದಾಪುರ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಸಾರ್ವಜನಿಕ ಹಿತಾಸಕ್ತಿಯಿಂದ ಕೋವಿಡ್ -19 ವಿರುದ್ಧ ಪ್ರಕಟಿಸಿದ ಪೋಸ್ಟರ್ಸ್, ಸ್ಟಿಕರ್ಸ್, ಪಾಂಪ್ಲೆಟ್ಸ್ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.
ಕುಂದಾಪುರ ತಾಲೂಕಿನ ಗ್ರಾಮಪಂಚಾಯಿತಿಗಳಾದ ಗೋಪಾಡಿ, ಗಂಗೊಳ್ಳಿ, ಕಟ್ಟೆ ಬೆಳ್ತುರ್,ಕುಂಬಾಷಿ, ತಲ್ಲೂರು, ಹಟ್ಟಿಯಂಗಡಿ, ಮರವಂತೆ, ತ್ರಾಸಿ, ಗುಜ್ಜಾಡಿ ಮತ್ತು ಹಂಗಳೂರು ಪಂಚಾಯಿತುಗಳಿಗೆ ನೀಡಲಾಯಿತು.ಬಿ.ವಿ.ಟಿ ಯ ಸಿಬ್ಬಂದಿಗಳಾದ ಮನೋಹರ್ ಕಟ್ಟಗೇರಿ, ಅರುಣ್ ಪಾಠವರ್ಧನ್, ರಾಘವೇಂದ್ರ ಆಚಾರ್ ಮತ್ತು ಸುರೇಶ ಕುಲಾಲ್ ಇವುಗಳನ್ನು ಹಂಚಿದರು.
ಬಿ.ವಿ.ಟಿ ಯ ಹಿರಿಯ ಸಲಹೆಗಾರ ಶ್ರೀಕಾಂತ್ ಹೊಳ್ಳ ಮತ್ತು ಮಾಸ್ಟರ್ ಟ್ರೈನರ್ ಸುಧೀರ್ ಕುಲಕರ್ಣಿ ಮಾರ್ಗದರ್ಶನ ನೀಡಿದರು.