ಉಡುಪಿ ಶ್ರೀ ಕೃಷ್ಣ ಬಾಲನಿಕೇತನಕ್ಕೆ ರಾಜ್ಯ ಉಪಲೋಕಾಯುಕ್ತ ಶ್ರೀ ಫಣೀಂದ್ರ ಭೇಟಿ

ಉಡುಪಿ ಶ್ರೀ ಕೃಷ್ಣ ಬಾಲನಿಕೇತನಕ್ಕೆ ರಾಜ್ಯ ಉಪಲೋಕಾಯುಕ್ತ ಶ್ರೀ ಫಣೀಂದ್ರ ರವರು ಭೇಟಿನೀಡಿ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರಿಂದ ಸಂಸ್ಥಾಪಿತವಾದ ಈ ಸಂಸ್ಥೆ ಅದರಲ್ಲಿರುವ ಮಕ್ಕಳು ಉತ್ತಮ ರೀತಿಯಲ್ಲಿ ಕಲಿತು ತಮ್ಮಭವಿಷ್ಯರೂಪಿಸುವಲ್ಲಿ ತನ್ನ ಜವಾಬ್ದಾರಿ ಯನ್ನು ನಿರ್ವಹಿಸಿದ್ದು ಅದರ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು ಮತ್ತು ಸಂಸ್ಥೆ ಮತ್ತು ಅದರಲ್ಲಿರುವ ಮಕ್ಕಳಿಗೆ ಶುಭವನ್ನು ಹಾರೈಸಿದರು. ಮಕ್ಕಳ ಕಲ್ಯಾಣಸಮಿತಿಯ ಮಾಜಿ ಅದ್ಯಕ್ಷ ನಾರಾಯಣ ಬಿ.ಕೆ. ಸಂಸ್ಥೆಯ ಉಪಾಧ್ಯಕ್ಷ ಪ್ರೋ.ಕಮಲಾಕ್ಷ, ಕಾರ್ಯ ದರ್ಶಿ ರಾಮಚಂದ್ರ ಉಪಾಧ್ಯಾಯ, ಸದಸ್ಯ ರಾದ ರಾಘವೇಂದ್ರ ರಾವ್, ಮಟ್ಟು ಲಕ್ಷ್ಮೀನಾರಾಯಣ ರಾವ್, ಗುರುರಾಜ ಭಟ್, ಸುಹಾನಿ ಕಾಮತ್ ಮುಂತಾದವರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply