ವಿದ್ಯಾರ್ಥಿಗಳೇ ಕಟ್ಟಿದ ತಂಡದಿಂದ ಅಶಕ್ತ ವಿದ್ಯಾರ್ಥಿಗಳಿಗೆ ನೆರವು!

ಉಡುಪಿ: ಕಾಲೇಜು ವಿದ್ಯಾರ್ಥಿಗಳು ಸೇರಿ ಕಟ್ಟಿದ ಭಜರಂಗ ನಾಸಿಕ್ ಬ್ಯಾಂಡ್ ಉಡುಪಿ ಇದೀಗ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ವೇಷ ಧರಿಸಿ ಹಣವನ್ನು ಸಂಗ್ರಹಿಸಿ ಅಶಕ್ತ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ.

ಇತ್ತೀಚೆಗೆ ಗಣೇಶ ಚತುರ್ಥಿ ಹಬ್ಬದಂದು 2 ದಿನ ವೇಷ ಧರಿಸಿ ಉಡುಪಿಯ ಆಸುಪಾಸಿನಲ್ಲಿ ಸಾಧ್ಯವಾದಷ್ಟು ದಾನಿಗಳಿಂದ ಹಣವನ್ನು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಈ ಹಣವನ್ನು 21/09/2022 ಬುಧವಾರದಂದು ಸಂಜೆ 5 ಗಂಟೆಗೆ ರೋಟರಿ ಸ್ಕೌಟ್ ಭವನ, ಕಮಲ ಬಾಯಿ ಹೈಸ್ಕೂಲ್ ಕಡಿಯಾಳಿಯಲ್ಲಿ ಸಮಾಜದಲ್ಲಿರುವ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಅಶಕ್ತ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಿದ್ದಾರೆ.

 
 
 
 
 
 
 
 
 

Leave a Reply