ಬಜಗೋಳಿ : ವೈದ್ಯಕೀಯ ಪ್ರಕೋಷ್ಟದಿಂದ ವನಮಹೋತ್ಸವ ಕಾರ್ಯಕ್ರಮ

ಬಜಗೋಳಿ :- ಬಿಜೆಪಿ ವೈದ್ಯಕೀಯ ಪ್ರಕೋಷ್ಟ, ಉಡುಪಿ ಜಿಲ್ಲೆ ಲಯನ್ಸ್ ಕ್ಲಬ್ ಬಜಗೋಳಿ ಹಾಗೂ ಹಾಗೂ ಸುವರ್ಣ ಎಂಟರ್ ಪ್ರೈಸಸ್ ಇದರ ವತಿಯಿಂದ ಬಜಗೋಳಿ ಸರ್ಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ಬೃಹತ್ ವನಮಹೋತ್ಸವ ಕಾರ್ಯಕ್ರಮ ಇಂದು ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಚಾಲನೆ ನೀಡಿ ಶುಭ ಹಾರೈಸಿದರು.ಅಧ್ಯಕ್ಷತೆಯನ್ನು ಸಂಘಟಕ ಡಾ. ರಾಮದಾಸ್ ಹೆಗ್ಡೆ ವಹಿಸಿ ಮುಂದಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ವೈದ್ಯಕೀಯ ಪ್ರಕೋಷ್ಟ ಜಿಲ್ಲಾ ಸಂಚಾಲಕ ಡಾ. ರಾಮಚಂದ್ರ ಕಾಮತ್ ಬಿಜೆಪಿ ವಿಭಾಗ ಸಂ.ಕಾರ್ಯದರ್ಶಿ ಪ್ರಸಾದ್, ಮುಡಾರು ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾದ್ಯಕ್ಷೆ ಅಮೃತ ಪ್ರಭ, ಕಾರ್ಕಳ ಕ್ಷೇತ್ರ ಅಧ್ಯಕ್ಷ ಮಹಾವೀರ್ ಹೆಗ್ಡೆ, ಮಹಿಳಾ ಮೋರ್ಚಾ ಕಾರ್ಯದರ್ಶಿ ವಿನಯ ಬಂಗೇರ, ಲಯನ್ಸ್ ಅಧ್ಯಕ್ಷ ಸದಾಶಿವ ಪೂಜಾರಿ, ಮಧುಸೂಧನ್ ಹೇರೂರು, ಸುಂದರ ಪೂಜಾರಿ,ರಾಘವೇಂದ್ರ ಪ್ರಭು,ಕರ್ವಾಲು ಮೂಡುಕುಕುಡೆ, ಡಾ.ಮೋಗೆರಾಯ, ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply