ಮಂಗಳೂರು : ಬೈಕಂಪಾಡಿ ತಿರುವು ರಸ್ತೆಗೆ ಇಂಟರ್ ಲಾಕ್ ಅಳವಡಿಕೆ

ಬೈಕಂಪಾಡಿ: ಕಳೆದ ಹಲವಾರು ಸಮಯದಿಂದ ಕೆಐಎಡಿಬಿ ಹೆದ್ದಾರಿಗೆ ಹೊಂದಿಕೊಂಡಂತೆ  ಸೇರಿದ ರಸ್ತೆ ಕೆಟ್ಟು ಹೋಗಿತ್ತು.  ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದನ್ನು ಸಣ್ಣ ಕೈಗಾರಿಕಾ ಸಂಘದ ಮನವಿ ಮೇರೆ ತಮ್ಮ ಮಲೆನಾಡು ಅಭಿವೃದ್ಧಿ ನಿಧಿಯಿಂದ ಶಾಸಕ ಡಾ.ಭರತ್ ಶೆಟ್ಟಿ ವೈ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ನಡೆಸಿಕೊಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ಶನಿವಾರ ಸಂಘದ ಕಚೇರಿಯಲ್ಲಿ ಶಾಸಕರನ್ನು ಗೌರವಿಸಲಾಯಿತು.ಕೈಗಾರಿಕಾ ಪ್ರದೇಶದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಇದೀಗ ತಿರುವು ರಸ್ತೆಯಲ್ಲಿ ಇದ್ದ ಸಮಸ್ಯೆಗೆ ಇಂಟರ್ ಲಾಕ್ ಅಳವಡಿಸಿ ಸರಿ ಪಡಿಸಲಾಗಿದೆ ಎಂದರು. ಕಾರ್ಮಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಲಸಿಕೆ ಮೇಳ ಹಮ್ಮಿಕೊಳ್ಳುವುದಾದರೆ ನೆರವು ಒದಗಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಅಜಿತ್ ಕಾಮತ್,ಕಾರ್ಪೋರೇಟರ್ ಸುಮಿತ್ರ ಕರಿಯಾ ,ಗೌರವ್ ಹೆಗ್ಡೆ,ಹೇಮಂತ್,ಜೀವನ್ ಸಲ್ದಾನ , ಗೌರವ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply