ಆಟವಾಡುತ್ತಿದ್ದ ವೇಳೆ ಬಾವಿಗೆ ಬಿದ್ದು ಮಗು ಸಾವು

ಶಿರ್ವ : ಮಗವೊಂದು ಆಟವಾಡುತ್ತಿರುವಾಗ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ಉಡುಪಿ ಜಿಲ್ಲೆಯ ಶಿರ್ವದ ಬಳಿ ಮುದರಂಗಡಿಯ ಪೇಟೆಯಲ್ಲಿ ಇಂದು ಸಂಜೆ ನಡೆದಿದೆ ಎಂದು ತಿಳಿದು ಬಂದಿದೆ.

ಮೃತ ಬಾಲಕಿ ಅದಮಾರಿನ ಜಯಲಕ್ಷ್ಮೀ ಮತ್ತು ಕೃಷ್ಣ ದಂಪತಿಗಳ ಎರಡುವರೇ ವರ್ಷದ ಪ್ರಿಯಾಂಕ ಎನ್ನಲಾಗಿದೆ. ಮುದರಂಗಡಿಯ ಪೇಟೆಯಲ್ಲಿ ತಂದೆತಾಯಿಯೊಂದಿಗೆ ಬಟ್ಟೆ ತೆಗೆದುಕೊಳ್ಳಲು ಬಂದ ಸಂಧರ್ಭದಲ್ಲಿ ಮಗು ಆಟವಾಡುತ್ತಿದ್ದಾಗ ಅಲ್ಲಿಯೇ ಇದ್ದ ಪಕ್ಕದ ಬಾವಿಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ.

 ಶಿರ್ವ ಠಾಣೆಯ ಪೊಲೀಸರು ಮತ್ತು ಸ್ಥಳೀಯರು ಬಾವಿಯಲ್ಲಿ ಹುಡುಕಿದಾಗ ಮಗು ಬಾವಿಯಲ್ಲಿ ಪತ್ತೆಯಾಗಿದೆ.ಈ ಹಿನ್ನೆಲೆ ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply