ಕೋವಿಡ್ ಸಂಕಷ ಸಮಯದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರುಹಾಗೂ ಉಡುಪಿ ಕೋ- ಆಪರೇಟಿವ್ ಟೌನ್ ಬ್ಯಾಂಕಿನ ಸದಸ್ಯರೂ ಆದ ರಾಜೀವಿ, ಸುಲತಾ, ಬೇಬಿ ಎಸ್. ಪೂಜಾರಿ, ಲಕ್ಷ್ಮೀ ಮತ್ತು ಸುಜಾತರವರನ್ನು ಬ್ಯಾಂಕಿನ ವತಿಯಿಂದ ಅಧ್ಯಕ್ಷರಾದ ಎಚ್. ಜಯಪ್ರಕಾಶ್ಕೆದ್ಲಾಯರವರು ಗೌರವ ಧನ ನೀಡಿ ಸನ್ಮಾನಿಸಿದರು.
ಉಪಾಧ್ಯಕ್ಷರಾದ ಪಿ.ರಾಘವೇಂದ್ರ ಭಟ್, ನಿರ್ದೇಶಕ ಮಂಡಳಿಯ ಸದಸ್ಯರಾದ ಹೆಚ್.ಎನ್. ರಾಮಕೃಷ್ಣರಾವ್, ಪಿ.ಎನ್. ರವೀಂದ್ರ ರಾವ್, ಜಗನ್ನಾಥ್ ಜಿ., ಭಾಸ್ಕರ್ ರಾವ್ ಕಿದಿಯೂರು,ಎನ್. ಸೂರ್ಯಪ್ರಕಾಶ್ ರಾವ್, ಎನ್. ಪ್ರಹ್ಲಾದ್ ಬಲ್ಲಾಳ್, ಮನೋರಮಾಎಸ್., ರೂಪಾ ಮೋಹನ್, ಜಯಪ್ರಕಾಶ್ ಭಂಡಾರಿ, ದೇವದಾಸ್, ಪ್ರಧಾನವ್ಯವಸ್ಥಾಪಕ ಎಸ್.ಕುಮಾರಸ್ವಾಮಿ ಉಡುಪ, ಮುಖ್ಯ ಸಲಹೆಗಾರ ಬಿ.ರಂಗನಾಥ ಸಾಮಗ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪ ಪ್ರಧಾನ ವ್ಯವಸ್ಥಾಪಕ ಪಿ. ವಿಷ್ಣುಮೂರ್ತಿ ಆಚಾರ್ಯ ವಂದಿಸಿದರು.