ಕೊರೊನಾದಿಂದ ಮೃತಪಟ್ಟವರಿಗೆ ಸಚಿವ ಅಶೋಕ್ ಪಿಂಡ ಪ್ರದಾನ ಕಾರ್ಯ ಅತ್ಯಂತ ಶ್ಲಾಘನೀಯ : ಪೇಜಾವರ ಶ್ರೀ

ಉಡುಪಿ : ಕರ್ನಾಟಕದಲ್ಲಿ ಕೊರೊನಾ ಮಹಾವ್ಯಾಧಿಯಿಂದ ಮೃತರಾದ 1130 ಮಂದಿಗೆ ಸದ್ಗತಿ ದೊರಕಲೆಂಬ ಆಶಯದೊಂದಿಗೆ ರಾಜ್ಯ ಕಂದಾಯ ಮಂತ್ರಿ ಆರ್ ಅಶೋಕ್ ಪಿಂಡ ಪ್ರದಾನ ಪೂರ್ವಕ ಉತ್ತರಕ್ರಿಯಾ ವಿಧಿಯನ್ನು ನಡೆಸಿರುವುದಕ್ಕೆ ಶ್ರೀ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದಾರೆ.

ಇದೊಂದು ಸ್ತುತ್ಯರ್ಹವಾದ ಕೆಲಸ . ನಮ್ಮ ಸನಾತನ ನಂಬಿಕೆಯನುಸಾರ ಮೃತರಾದವರಿಗೆ ಔರ್ಧ್ವದೈಹಿಕ ಕ್ರಿಯೆಗಳನ್ನು ನಡೆಸಿ ಸದ್ಗತಿಗಾಗಿ ಪ್ರಾರ್ಥಿಸುವುದು ಅತ್ಯಂತ ಅವಶ್ಯ ಕರ್ತವ್ಯ. ಮಹಾವ್ಯಾಧಿಯಿಂದ ಮೃತರಾದ ಇಷ್ಟು ಮಂದಿಗೆ ಆ ವಿಧಿಗಳನ್ನು ನಡೆಸಲು ರೋಗದ ಭಯದಿಂದಲೋ ಏನೋ ಈ ಕ್ರಿಯೆಗಳನ್ನು ನಡೆಸಲು ಹಿಂದೇಟು ಹಾಕಿದಾಗ ಪ್ರಜಾತಾಂತ್ರಿಕ ಸರ್ಕಾರದ ಪರವಾಗಿ ಆ ಜವಾಬ್ದಾರಿ ಹೊತ್ತು ಸಚಿವ ಅಶೋಕ್ ಈ ಕೆಲಸ ಮಾಡಿರುವುದನ್ನು ಕಂಡು ನಮಗೆ ಅತೀವ ಸಂತಸವಾಗಿದೆ ಎಂದು ಶ್ರೀಗಳು ಬಣ್ಣಿಸಿದ್ದಾರೆ. 

ಈ ಹಿಂದೆ ಕೋವಿಡ್ ನಿಂದ ಮೃತಪಟ್ಟ ನೂರಾರು ಜನರ ಅಸ್ಥಿ ವಿಸರ್ಜನೆಯ ಕಾರ್ಯವನ್ನೂ ಅಶೋಕ್ ರವರು ವಿಧಿವತ್ತಾಗಿ ನಡೆಸಿರುವುದನ್ನೂ ಶ್ರೀಗಳು ಅಭಿನಂದಿಸಿ ಸ್ಮರಿಸಿದ್ದಾರೆ.

 
 
 
 
 
 
 
 
 
 
 

Leave a Reply